ನೆಲ್ಯಾಡಿ ಶಾಂತಿಬೆಟ್ಟು ನಿವಾಸಿ ಸಾದಿಕ್‌ ಮನೆಗೆ ಎನ್.ಐ.ಎ ದಾಳಿ

0

ನೆಲ್ಯಾಡಿ: ಪ್ರವೀಣ್‌ ನೆಟ್ಟಾರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ವಿರುದ್ಧ ಕಾರ್ಯಾಚರಣೆ ಕೈಗೊಂಡಿರುವ ಎನ್.ಐ.ಎ ಅಧಿಕಾರಿಗಳ ತಂಡ ನೆಲ್ಯಾಡಿ ಸಮೀಪದ ಶಾಂತಿಬೆಟ್ಟು ನಿವಾಸಿ ಸಾದಿಕ್‌ ಎಂಬವರ ಮನೆಗೆ ಇಂದು ನ.5ರಂದು ಬೆಳಿಗ್ಗೆ  ದಾಳಿ ನಡೆಸಿದೆ. 

ಪ್ರವೀಣ್‌ ನೆಟ್ಟಾರು ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳ ಬಂಧನ ಕಾರ್ಯಾಚರಣೆ ಕೈಗೊಂಡಿರುವ ಎನ್.ಐ.ಎ ಅಧಿಕಾರಿಗಳ ತಂಡ ನ.4ರಂದು ರಾತ್ರಿ ನೆಲ್ಯಾಡಿಗೆ ಆಗಮಿಸಿದ್ದು ನ.5ರಂದು ಬೆಳಿಗ್ಗೆ ಕೌಕ್ರಾಡಿ ಗ್ರಾಮದ ಶಾಂತಿಬೆಟ್ಟು ಎಂಬಲ್ಲಿರುವ ಸಾದಿಕ್‌ ರವರ ಮನೆಗೆ ದಾಳಿ ನಡೆಸಿ ಶೋಧ ಕೈಗೊಂಡಿದೆ. ಈ ವೇಳೆ ಸಾದಿಕ್‌ ರವರು ಮನೆಯಲ್ಲಿ ಇರಲಿಲ್ಲ ಎಂದು ತಿಳಿದುಬಂದಿದೆ.

ಕೆಲವರ್ಷಗಳ ಹಿಂದೆ ಬಿ.ಸಿರೋಡಿನಲ್ಲಿ ನಡೆದ ಶರತ್‌ ಮಡಿವಾಳ ಕೊಲೆ ಪ್ರಕರಣದ ಆರೋಪಿಗಳಿಗೆ ಸಹಕಾರ ನೀಡಿದ ಆರೋಪದಲ್ಲಿ ಸಾದಿಕ್‌ ರನ್ನು ಬಂಧಿಸಲಾಗಿತ್ತು. ಆ ಬಳಿಕ ಅವರು ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದರು. ಸಾದಿಕ್‌ ರವರು ನೆಲ್ಯಾಡಿಯಲ್ಲಿ ಕೆಲ ಸಂಘಟನೆಗಳೊಂದಿಗೆ ಗುರುತಿಸಿಕೊಂಡಿದ್ದರು.

LEAVE A REPLY

Please enter your comment!
Please enter your name here