ರಾಜ್ಯಮಟ್ಟದ ಎಕ್ಸೆಲ್ ಶೋಧ ವಿಜ್ಞಾನ ಮೇಳದಲ್ಲಿ ತೆಂಕಿಲ ವಿವೇಕಾನಂದ ಆ.ಮಾ.ಶಾಲೆಗೆ ಸಮಗ್ರ ಪ್ರಶಸ್ತಿ

0

ಪುತ್ತೂರು : ಗುರುವಾಯನಕೆರೆ ಎಕ್ಸೆಲ್ ಪದವಿಪೂರ್ವ ಕಾಲೇಜಿನಲ್ಲಿ ನಡೆದ ರಾಜ್ಯಮಟ್ಟದ ಶೋಧ ವಿಜ್ಞಾನ ಮತ್ತು ಕಲಾ ಸ್ಪರ್ಧೆ ಎಕ್ಸೆಲ್ ಶೋಧದಲ್ಲಿ ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ಸಮಗ್ರ ಪ್ರಶಸ್ತಿ ಪಡೆದುಕೊಂಡಿದೆ. ವಿಜ್ಞಾನ ಮಾದರಿಯಲ್ಲಿ 8ನೇ ತರಗತಿಯ ಸಮನ್ವಿತಾ (ಡಾ.ಗುರುರಾಜ್.ಎಂ ಮತ್ತು ಡಾ.ಶ್ರೀದೇವಿ ದಂಪತಿ ಪುತ್ರಿ) ಮತ್ತು ಲಕ್ಷ್ಯ(ದಿನೇಶ್ ಕುಮಾರ್ ಮತ್ತು ರೇಖಾ ದಂಪತಿ ಪುತ್ರಿ) ಪ್ರಥಮ ಸ್ಥಾನ, ವಿಜ್ಞಾನ ರಸಪ್ರಶ್ನೆ- 10ನೇ ತರಗತಿಯ ಅನ್ವಿತ್ ಎನ್.(ಶ್ರೀಪತಿ.ಎನ್ ಮತ್ತು ವಿದ್ಯಾಲಕ್ಷ್ಮೀ ದಂಪತಿ ಪುತ್ರಿ) ಮತ್ತು ಅಭಿರಾಮ್ ಭಟ್(ನಾರಾಯಣ ಪ್ರಸಾದ್.ಪಿ.ಎಸ್ ಮತ್ತು ರಮ್ಯ ಕಾವೇರಿ ದಂಪತಿ ಪುತ್ರಿ) – ಪ್ರಥಮ ಸ್ಥಾನ, ಇಂಗ್ಲೀಷ್ ಭಾಷಣ- 8ನೇ ತರಗತಿಯ ಜಿ.ವೈಷ್ಣವಿ ಪೈ(ನಾಗೇಶ್ ಪೈ ಮತ್ತು ಸಹನಾ ಪೈ ದಂಪತಿ ಪುತ್ರಿ) – ಪ್ರಥಮ ಸ್ಥಾನ, ಪೆನ್ಸಿಲ್ ಸ್ಕೆಚ್ – 10ನೇ ತರಗತಿಯ ಕೀರ್ತನ್.ಕೆ(ಕಿಶನ್ ಭಟ್.ಎನ್.ಎಸ್ ಮತ್ತು ಉಷಾ.ಕೆ ದಂಪತಿ ಪುತ್ರ) ದ್ವಿತೀಯ ಸ್ಥಾನ, ಪೈಂಟಿಂಗ್- 8ನೇ ತರಗತಿಯ ಅನುಶ್ರೀ(ಮನಿಕಂಡನ್ ನಾಯರ್ ಮತ್ತು ಅನಿತಾ.ಎನ್ ದಂಪತಿ ಪುತ್ರಿ) ದ್ವಿತೀಯ ಸ್ಥಾನ, ಚೆಸ್- 10ನೇ ತರಗತಿಯ ಪ್ರಣೀಲ್ ರೈ(ಪ್ರಕಾಶ್ ರೈ ಮತ್ತು ಸತ್ಯಲತ ದಂಪತಿ ಪುತ್ರ) ಪ್ರಥಮ ಸ್ಥಾನ ಪಡೆದಿರುತ್ತಾರೆ. ಪ್ರಥಮ ಸ್ಥಾನ ಗಳಿಸಿದ ವಿದ್ಯಾರ್ಥಿಗಳಿಗೆ ರೂ.3000 ನಗದು ಬಹುಮಾನ, ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆ ಹಾಗೂ ದ್ವಿತೀಯ ಸ್ಥಾನ ಗಳಿಸಿದ ವಿದ್ಯಾರ್ಥಿಗಳಿಗೆ ರೂ.2000/- ನಗದು ಬಹುಮಾನ, ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆ ಹಾಗೂ ಸಮಗ್ರ ಪ್ರಶಸ್ತಿಯು ರೂ.15000/- ನಗದು ಬಹುಮಾನ, ಪ್ರಶಸ್ತಿ ಪತ್ರ ಮತ್ತು ಶಾಶ್ವತ ಫಲಕ ಒಳಗೊಂಡಿರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here