ಪುತ್ತೂರು: ನೆಟ್ಟಣಿಗೆಮುಡ್ನೂರು ಗ್ರಾಮದ ಮೇನಾಲದಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಗದಗ ಮೂಲದ ವ್ಯಕ್ತಿ ನಾಪತ್ತೆಯಾಗಿರುವ ಕುರಿತು ಪೊಲೀಸರಿಗೆ ದೂರು ನೀಡಲಾಗಿದೆ.
ಮೇನಾಲದ ಆಸಿಂ ಎಂಬವರ ಬಾಡಿಗೆ ಮನೆಯಲ್ಲಿ ವಾಸ್ತವ್ಯ ಹೊಂದಿರುವ ಗದಗ ಮೂಲದ ರಾಮ ಪಾಂಡಪ್ಪ(34ವ)ರವರು ನಾಪತ್ತೆಯಾದವರು. ಅವರು ಈಶ್ವರಮಂಗಲದ ರಾಗಾಳಿ ಎಂಬಲ್ಲಿರುವ ಪುರುಷೋತ್ತಮ ಭಟ್ ಎಂಬವರ ಮನೆಗೆ ಕೂಲಿ ಕೆಲಸಕ್ಕೆ ಹೋಗುತ್ತಿದ್ದರು. ಅ.30ರಂದು ಕೆಲಸಕ್ಕೆ ಹೋದವರು ಹಿಂದಿರುಗಿಲ್ಲ ಎಂದು ರಾಮ ಪಾಂಡಪ್ಪ ಅವರ ಸಹೋದರ ಸೇವಾ ಪಾಂಡಪ್ಪ ಲಂಬಾಣಿ ಅವರು ಪುರುಷೋತ್ತಮ ಭಟ್ ಅವರಿಗೆ ಕರೆ ಮಾಡಿ ವಿಚಾರಿಸಿದಾಗ ರಾಮ ಪಾಂಡಪ್ಪ ಕೆಲಸಕ್ಕೆ ಬಾರದೆ ಇರುವ ಮಾಹಿತಿ ಪಡೆದು ಬಳಿಕ ಪರಿಸರದಲ್ಲಿ ಹುಡುಕಾಡಿ, ಗದಗ್ನಲ್ಲಿರುವ ಸಂಬಂಧಿಕರಿಗೂ, ಗೋವಾದಲ್ಲಿರುವ ಅಕ್ಕನಿಗೂ ಕರೆ ಮಾಡಿ ವಿಚಾರಿಸಿದರೂ ರಾಮ ಪಾಂಡಪ್ಪ ಪತ್ತೆಯಾಗದ ಹಿನ್ನೆಲೆಯಲ್ಲಿ ಸೇವಾ ಪಾಂಡಪ್ಪ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.