ಶ್ರೀ ಕ್ಷೇತ್ರ ಕೆಯ್ಯೂರು ದೇವಳದಲ್ಲಿ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ,ಬಲಿವಾಡು ಕೂಟ

0

 

 ಕೆಯ್ಯೂರು : ಕೆಯ್ಯೂರು ಗ್ರಾಮದ ಶ್ರೀ ಮಹಿಷಮರ್ಧಿನಿ ದುರ್ಗಾಪರಮೇಶ್ವರಿ ದೇವಸ್ಥಾನ ಕೆಯ್ಯೂರಿನಲ್ಲಿ ಸಾರ್ವಜನಿಕ ಶ್ರೀ ಸತ್ಯ ನಾರಾಯಣ ಪೂಜೆ ಮತ್ತು ಬಲಿವಾಡು ಕೂಟವು ನ5ರಂದು ಬೆಳಗ್ಗೆ 9.30ಕ್ಕೆ ದೇವರಿಗೆ ದೇವಳದ  ಪ್ರದಾನ ಅರ್ಚಕರಾದ ಶ್ರೀನಿವಾಸ ರಾವ್, ಆನಂದ ಭಟ್ ಪ್ರಾರ್ಥನೆ ಸಲ್ಲಿಸಿ, ಸೋಮಸುಂದರ್ ಭಟ್ ಮತ್ತು ಕಿಶೋರ್ ಭಟ್ ಅರ್ತ್ಯಡ್ಕ  ಪೌರೋಹಿತ್ಯದಲ್ಲಿ ಪೂಜೆಯು ದೇವಳಯದ ಸಭಾಂಗಣದಲ್ಲಿ  ನಡೆಯಿತು.ಪೂಜೆಯಲ್ಲಿ 300 ಕ್ಕಿಂತಲೂ ಅಧಿಕ ಭಕ್ತರು ಪೂಜೆಯಲ್ಲಿ ಭಾಗವಹಿಸಿದ್ದರು.

 ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಿತು  ಕೆಯ್ಯೂರು ದೇವಳದ ವ್ಯವಸ್ಥಾಪನಾ  ಸಮಿತಿ ಅಧ್ಯಕ್ಷ ಶಶಿಧರ ರಾವ್ ಬೊಳಿಕಲ, ಸದಸ್ಯರುಗಳಾದ ರಾಮಣ್ಣ ಗೌಡ ಮಾಡಾವು, ಬಾಬು ಪಾಟಾಳಿ ದೇರ್ಲ, ಚರಣ್ ಸಣಂಗಳ,  ಪದ್ಮನಾಭ ಪಿ.ಎಸ್ ಪಲ್ಲತ್ತಡ್ಕ, ವಿಶ್ವನಾಥ ಶೆಟ್ಟಿ ಸಾಗು, ಚರಣ್ ಕುಮಾರ್ ಸಣಂಗಳ, ಈಶ್ವರಿ ಜೆ ರೈ ಸಂತೋಷ್ ನಗರ, ಮಮತಾ ಎಸ್ ರೈ ಕೆಯ್ಯೂರು, ಮಾಜಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು, ಸದಸ್ಯರುಗಳು, ಶ್ರೀ ದುರ್ಗಾ ಭಜನಾ ಮಂಡಳಿ ಅಧ್ಯಕ್ಷರು,ಸದಸ್ಯರುಗಳು,ಅರ್ಚಕವೃಂದ, ಸಿಬ್ಬಂದಿ ವರ್ಗ, ಭಕ್ತಾಧಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here