ಪುತ್ತೂರು: ಕರ್ನಾಟಕ ಸರಕಾರ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು ಮತ್ತು ಶ್ರೀ ರಾಮಕೃಷ್ಣ ಪ್ರೌಢಶಾಲೆ ಪುತ್ತೂರು ಇದರ ಜಂಟಿ ಆಶ್ರಯದಲ್ಲಿ ನವೆಂಬರ್ 2 ಮತ್ತು 3 ರಂದು ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ನಡೆದ ಪುತ್ತೂರು ನಗರ ವಲಯದ ಕ್ರೀಡಾಕೂಟದಲ್ಲಿ ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿಭಾಗಗಳಲ್ಲಿ ವೈಯಕ್ತಿಕ ಪ್ರಶಸ್ತಿ ಮತ್ತು ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿದ್ದು, ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದು ನವೆಂಬರ್ 9 ಮತ್ತು 10ರಂದು ಸೈಂಟ್ ಆನ್ಸ್ ಕಡಬದಲ್ಲಿ ನಡೆಯಲಿರುವ ತಾಲೂಕು ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ.
ಪ್ರಾಥಮಿಕ ವಿಭಾಗದ ಬಾಲಕರಲ್ಲಿ ಚೇತಸ್:400ಮೀ-ಪ್ರಥಮ, 600ಮೀ-ಪ್ರಥಮ, 4*100 ಮೀಟರ್ ರಿಲೇ – ತೃತೀಯ, ತನುಷ್.ಕೆ- 4*100 ಮೀಟರ್ ರಿಲೇ – ತೃತೀಯ, ಶಮಿತ್.ಎಸ್: 4*100 ಮೀಟರ್ ರಿಲೇ – ತೃತೀಯ, ಧನುಷ್.ಪಿ.ಡಿ-4*100 ಮೀಟರ್ ರಿಲೇ – ತೃತೀಯ ಸ್ಥಾನ ಪಡೆದಿರುತ್ತಾರೆ.
ಪ್ರಾಥಮಿಕ ವಿಭಾಗದ ಬಾಲಕಿಯರಲ್ಲಿ ದಿವಿಜ್ಞಾ.ಯು.ಎಸ್- 100ಮೀ-ಪ್ರಥಮ, 200ಮೀ-ಪ್ರಥಮ, 4*100 ಮೀಟರ್ ರಿಲೇ – ಪ್ರಥಮ, ಮನ್ವಿತಾ ನೆಕ್ಕರೆ-600ಮೀ -ಪ್ರಥಮ, 400ಮೀ-ಪ್ರಥಮ, 4*100 ಮೀಟರ್ ರಿಲೇ – ಪ್ರಥಮ, ಸುಹಾನಿ: 600ಮೀ -ದ್ವಿತೀಯ, ನಿಧಿಶ್ರೀ: 4*100 ಮೀಟರ್ ರಿಲೇ – ಪ್ರಥಮ, ಸಾನ್ವಿ: 200 ಮೀ– ತೃತೀಯ, ರಿಮ್ಸ್ ಆಯಿಷಾ: ಗುಂಡು ಎಸೆತ: ತೃತೀಯ, ಮಾನ್ಯ ಲಕ್ಷ್ಮೀ: ಚಕ್ರ ಎಸೆತ-ತೃತೀಯ ಸ್ಥಾನ ಪಡೆದಿರುತ್ತಾರೆ.
8ನೇ ತರಗತಿಯ ಪ್ರಾಥಮಿಕ ವಿಭಾದ ಬಾಲಕರಲ್ಲಿ ಮನ್ವಿತ್ ನೆಕ್ಕರೆ: 100ಮೀ-ಪ್ರಥಮ, ಉದ್ದಜಿಗಿತ-ಪ್ರಥಮ, 4*100 ಮೀಟರ್ ರಿಲೇ – ಪ್ರಥಮ, ಮನೋಹರ್: 200ಮೀ-ಪ್ರಥಮ, ಉದ್ದಜಿಗಿತ- ದ್ವಿತೀಯ, 100ಮೀ-ತೃತೀಯ, 4*100 ಮೀಟರ್ ರಿಲೇ – ಪ್ರಥಮ, ಕೃಪಾಲ್.ಕೆ: 600ಮೀ-ಪ್ರಥಮ, 400ಮೀ-ಪ್ರಥಮ, 4*100 ಮೀಟರ್ ರಿಲೇ – ಪ್ರಥಮ, ಅಭಿಶ್ಯಾಮ.ಬಿ: ಎತ್ತರಜಿಗಿತ-ಪ್ರಥಮ, ಮನ್ವಿತ್.ಎಮ್.ರೈ: 4*100 ಮೀಟರ್ ರಿಲೇ – ಪ್ರಥಮ, 400ಮೀ-ದ್ವಿತೀಯ, ಚಕ್ರಎಸೆತ-ತೃತೀಯ ಸ್ಥಾನ ಪಡೆದಿರುತ್ತಾರೆ.
8ನೇ ತರಗತಿಯ ಪ್ರಾಥಮಿಕ ವಿಭಾದ ಬಾಲಕಿಯರಲ್ಲಿ ಡಿಂಪಲ್ ಶೆಟ್ಟಿ: 100ಮೀ-ಪ್ರಥಮ, ಉದ್ದಜಿಗಿತ-ಪ್ರಥಮ, 200ಮೀ-ದ್ವಿತೀಯ, 4*100 ಮೀಟರ್ ರಿಲೇ – ಪ್ರಥಮ, ಕೃತಿ.ಕೆ: 200ಮೀ-ಪ್ರಥಮ, 400ಮೀ-ಪ್ರಥಮ, 4*100 ಮೀಟರ್ ರಿಲೇ – ಪ್ರಥಮ, ಶ್ರೀವರ್ಣ.ಪಿ.ಡಿ: ಉದ್ದಜಿಗಿತ- ದ್ವಿತೀಯ, ಎತ್ತರಜಿಗಿತ-ಪ್ರಥಮ, 4*100 ಮೀಟರ್ ರಿಲೇ – ಪ್ರಥಮ, ಅಮೃತಾ.ಬಿ.ಎ: 600ಮೀ-ದ್ವಿತೀಯ, 400ಮೀ-ತೃತೀಯ, 4*100 ಮೀಟರ್ ರಿಲೇ – ಪ್ರಥಮ, ಜೀವಿತಾ: ಎತ್ತರಜಿಗಿತ- ತೃತೀಯ ಸ್ಥಾನ ಪಡೆದಿರುತ್ತಾರೆ.
ಪ್ರೌಢಶಾಲಾ ವಿಭಾಗದ ಬಾಲಕರಲ್ಲಿ ಯಶಸ್.ಎನ್: 200ಮೀ-ತೃತೀಯ, 4*100 ಮೀಟರ್ ರಿಲೇ -ತೃತೀಯ, ಸಚಿತ್.ಪಿ.ಕೆ: 400ಮೀ-ದ್ವಿತೀಯ, 800ಮೀ- ಪ್ರಥಮ, 4*100 ಮೀಟರ್ ರಿಲೇ -ತೃತೀಯ, ಆಶ್ರಯ್.ಎನ್:800ಮೀ-ದ್ವಿತೀಯ, ಚರಣ್ ಕುಮಾರ್- 1500ಮೀ –ಪ್ರಥಮ, 3000ಮೀ- ಪ್ರಥಮ, ಪ್ರಥಮ್.ಎಂ.ಪಿ: ಚಕ್ರಎಸೆತ-ದ್ವಿತೀಯ, ಧನ್ರಾಜ್: ಈಟಿಎಸೆತ-ದ್ವಿತೀಯ, ಅಮಿತ್ ಬೋರ್ಕರ್: 4*100 ಮೀಟರ್ ರಿಲೇ -ತೃತೀಯ, ಸಾತ್ವಿಕ್: 4*100 ಮೀಟರ್ ರಿಲೇ -ತೃತೀಯ, ಚವನ್ ಕುಮಾರ್ : ತ್ರಿವಿಧ ಜಿಗಿತ-ದ್ವಿತೀಯ, ಪ್ರಖ್ಯಾತ್.ಎಚ್.ವಿ: ಎತ್ತರಜಿಗಿತ-ತೃತೀಯ ಸ್ಥಾನ ಪಡೆದಿರುತ್ತಾರೆ.
ಪ್ರೌಢಶಾಲಾ ವಿಭಾಗದ ಬಾಲಕಿಯರಲ್ಲಿ ವಂಶಿ.ಬಿ.ಕೆ: 100ಮೀ-ಪ್ರಥಮ, 200ಮೀ-ಪ್ರಥಮ, 4*100 ಮೀಟರ್ ರಿಲೇ – ಪ್ರಥಮ, ಸಾನ್ವಿ.ಎಸ್.ಪಿ: ತ್ರಿವಿಧ ಜಿಗಿತ- ಪ್ರಥಮ, 100ಮೀ-ತೃತೀಯ, 4*100 ಮೀಟರ್ ರಿಲೇ – ಪ್ರಥಮ, ಬಿ.ಲಿಖಿತಾ.ರೈ- 4*100 ಮೀಟರ್ ರಿಲೇ – ಪ್ರಥಮ, 200ಮೀ-ದ್ವಿತೀಯ, ರಿದ್ಧಿ.ಸಿ. ಶೆಟ್ಟಿ: 400ಮೀ-ಪ್ರಥಮ, 800ಮೀ-ಪ್ರಥಮ, 4*100 ಮೀಟರ್ ರಿಲೇ – ಪ್ರಥಮ, ಅನ್ನಿಕಾ.ಎಂ: 1500ಮೀ –ದ್ವಿತೀಯ, 3000ಮೀ-ದ್ವಿತೀಯ, ಸಮೃದ್ಧಿ.ಜೆ.ಶೆಟ್ಟಿ: ಎತ್ತರಜಿಗಿತ-ಪ್ರಥಮ, ತ್ರಿವಿಧ ಜಿಗಿತ- ಪ್ರಥಮ, ಶ್ರದ್ಧಾಲಕ್ಷ್ಮೀ: ತ್ರಿವಿಧಜಿಗಿತ-ದ್ವಿತೀಯ, ಉದ್ಧಜಿಗಿತ-ದ್ವಿತೀಯ, ಪವಿತ್ರ: ಈಟಿಎಸೆತ: ತೃತೀಯ ಸ್ಥಾನ ಪಡೆದಿರುತ್ತಾರೆ. ಕ್ರೀಡಾಕೂಟದಲ್ಲಿ ಪ್ರಾಥಮಿಕ ವಿಭಾಗ ಮತ್ತು ೮ನೇ ತರಗತಿ ಮತ್ತು ಪ್ರೌಢ ವಿಭಾಗದಲ್ಲಿ 9 ವಿದ್ಯಾರ್ಥಿಗಳು ವೈಯಕ್ತಿಕ ಚಾಂಪಿಯನ್ಶಿಪ್ ನೊಂದಿಗೆ ಸಮಗ್ರ ಪ್ರಶಸ್ತಿ ಗಳಿಸಿರುತ್ತಾರೆ.
ದೈಹಿಕ ಶಿಕ್ಷಣ ವಿಭಾಗ ಮುಖ್ಯಸ್ಥ ಭಾಸ್ಕರ ಗೌಡ ಮುಂಗ್ಲಿಮನೆಯವರ ಮಾರ್ಗದರ್ಶನದಲ್ಲಿ ಹಿರಿಯ ದೈಹಿಕ ಶಿಕ್ಷಣ ಶಿಕ್ಷಕಿ ಆಶಾಲತಾ, ನಮಿತಾ, ದೀಪಕ್, ರಶ್ಮಿ, ಪವನ್ ಕುಮಾರ್ ರವರ ಸಹಕಾರದಲ್ಲಿ ದೈಹಿಕ ಶಿಕ್ಷಣ ಶಿಕ್ಷಕ ಗಿರೀಶ್ ಕಣಿಯಾರು ಮತ್ತು ವಾಣಿಶ್ರೀ ಯವರು ವಿದ್ಯಾರ್ಥಿ, ವಿದ್ಯಾರ್ಥಿನಿಯರನ್ನು ತರಬೇತುಗೊಳಿಸಿರುತ್ತಾರೆ ಎಂದು ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಮುಖ್ಯೋಪಾಧ್ಯಾಯರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.