ಕೆಮ್ಮಿಂಜೆ ದೇವಸ್ಥಾನದಲ್ಲಿ ಚಂದ್ರಗ್ರಹಣ ಪರಿಹಾರಾರ್ಥ ಗ್ರಹಣ ಶಾಂತಿ ಹವನ

0

ಪುತ್ತೂರು: ಗ್ರಸ್ತೋದಯ ಖಗ್ರಾಸ ಚಂದ್ರ ಗ್ರಹಣದ ಅಂಗವಾಗಿ ನ.8 ರಂದು ಸಂಜೆ ಕೆಮ್ಮಿಂಜೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ಹಾಗೂ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಗ್ರಹಣ ಶಾಂತಿ ಹವಣವು ನೆರವೇರಿತು.
ಸಂಜೆ ಗ್ರಹಣ ಸ್ಪರ್ಶ ಸಮಯದಲ್ಲಿ ಪ್ರಾರಂಭಗೊಂಡ ಹವಣ ಗ್ರಹಣ ಮೋಕ್ಷ ಕಾಲದ ತನಕ ನಡೆಯಿತು. ನಂತರ ಹವಣದ ಮಹಾಮಂಗಳಾರತಿ ಹಾಗೂ ಪ್ರಸಾದ‌ ವಿತರಣೆ ನಡೆಯಿತು.
ವ್ಯವಸ್ಥಾಪನಾ ಸಮಿತಿ‌ ಅಧ್ಯಕ್ಷ ಸುಬ್ರಹ್ಮಣ್ಯ ಬಳ್ಳಕ್ಕುರಾಯ, ಅರ್ಚಕ ವೆಂಕಟೇಶ ಭಟ್, ವ್ಯವಸ್ಥಾಪಕ ಪ್ರಶಾಂತ್, ಸದಸ್ಯರು ಹಾಗೂ ನೂರಾರು ಮಂದಿ ಭಕ್ತಾದಿಗಳು ಭಾಗವಹಿಸಿ, ಗ್ರಹಣ ಶಾಂತಿ ಹವಣ ನೆರವೇರಿಸಿ ಕೃತಾರ್ಥರಾದರು.

LEAVE A REPLY

Please enter your comment!
Please enter your name here