ಯುವವಾಹಿನಿ ಮಾಣಿ ಘಟಕದಿಂದ ಬಸ್ ನಿಲ್ದಾಣ ಸ್ವಚ್ಛತಾ ಕಾರ್ಯ

0

ಪುತ್ತೂರು: ಮಿತ್ತೂರಿನಲ್ಲಿ ಪ್ರಯಾಣಿಕರ ಅನುಕೂಲತೆಗಾಗಿ ಇಡ್ಕಿದು ಗ್ರಾಮ ಪಂಚಾಯತ್‌ನ ಸಹಕಾರದೊಂದಿಗೆ ನೂತನ ಬಸ್ ನಿಲ್ದಾಣವನ್ನು ಮಾಡಿದ ಯುವವಾಹಿನಿ ಮಾಣಿ ಘಟಕವು ನಿಲ್ದಾಣದ ವಾರ್ಷಿಕ ನಿರ್ವಹಣೆಯ ನಿಟ್ಟಿನಲ್ಲಿ ಘಟಕದ ಪದಾಧಿಕಾರಿಗಳು ಹಾಗೂ ಸದಸ್ಯರು ಮಿತ್ತೂರು ಬಸ್ ನಿಲ್ದಾಣದ ಸ್ವಚ್ಛತಾ ಕಾರ್ಯವನ್ನು ನೆರವೇರಿಸಿದರು.


ಯುವವಾಹಿನಿ ಮಾಣಿ ಘಟಕದ ಅಧ್ಯಕ್ಷ ಜಯಂತ್ ಬರಿಮಾರು ಇವರ ಮಾರ್ಗದರ್ಶನದಲ್ಲಿ ಮಾಜಿ ಅಧ್ಯಕ್ಷ ಹರೀಶ್ ಬಾಕಿಲ, ಮಾಜಿ ಸಲಹೆಗಾರ ಬಾಲಕೃಷ್ಣ ದೇಲಬೆಟ್ಟು, ನಿಯೋಜಿತ ಅಧ್ಯಕ್ಷ ರವಿಚಂದ್ರ ಬಾಬನಕಟ್ಟೆ , ಮಾಜಿ ಕಾರ್ಯದರ್ಶಿ ಸುಜಿತ್ ಅಂಚನ್, ಸಂಘಟನಾ ಕಾರ್ಯದರ್ಶಿಗಳಾದ ಜನಾರ್ದನ ಕೊಡಂಗೆ, ಕಾರ್ತಿಕ್ ಮಾಣಿ, ಪ್ರತ್ವಿಕ್ ಮಾಣಿ, ವಿಶ್ವನಾಥ ಕಿದೆನಾರು, ಸತೀಶ್ ಮುರುವ ಮೊದಲಾದವರು ಈ ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಇಡ್ಕಿದು ಗ್ರಾಮ ಪಂಚಾಯತ್ ಸದಸ್ಯರಾದ ರಮೇಶ್ ಪೂಜಾರಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here