ತಾಲೂಕು  ಮಟ್ಟದಲ್ಲಿ ಕೆಮ್ಮಾಯಿಯ ಸಚಿತ್ ಪಿ.ಕೆ., ಕೃಪಾಲ್ ಪಿ.ಕೆ  ಸಹೋದರರು ಜಿಲ್ಲಾ ಮಟ್ಟಕ್ಕೆ ಆಯ್ಕೆ

0

ಪುತ್ತೂರು: ಶಾಲಾ‌ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ವತಿಯಿಂದ ಕಡಬದಲ್ಲಿ ನಡೆದ ತಾಲೂಕು ಮಟ್ಟದ ಕ್ರೀಡಾ ಕೂಟದಲ್ಲಿ ಕೆಮ್ಮಾಯಿ ಬೋವುದಕಾಡು ಸಹೋದರರು ಇಬ್ಬರು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. 
17ರ ವಯೋಮಿತಿಯ 800 ಮೀಟರ್ ವಿಭಾಗದಲ್ಲಿ ಸಚಿತ್ ಪಿ.ಕೆ ಪ್ರಥಮ ಹಾಗೂ 14ರ ವಯೋಮಿತಿಯ 600 ಮೀಟರ್ ವಿಭಾಗದಲ್ಲಿ ಕೃಪಾಲ್ ಪಿ.ಕೆ ಪ್ರಥಮ ಸ್ಥಾನ ಪಡೆದ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ತೆಂಕಿಲ‌ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳಾಗಿರುವ  ಸಚಿತ್ ಪಿ.ಕೆ. ಹಾಗೂ ಕೃಪಾಲ್ ಪಿ.ಕೆ ಚಿಕ್ಕಮುಡ್ನೂರು ಗ್ರಾಮದ ಕೆಮ್ಮಾಯಿ ಬೋವುದಕಾಡು ನಿವಾಸಿ ಪ್ರಕಾಶ್ ಗೌಡ ಹಾಗೂ ಸುನಿತಾ ದಂಪತಿ ಪುತ್ರರಾಗಿದ್ದಾರೆ. 
ಕೃಪಾಲ್ ಇತ್ತೀಚಿಗೆ ಬಳ್ಳಾರಿಯಲ್ಲಿ ನಡೆದ ವಿದ್ಯಾಭಾರತಿ ವತಿಯಿಂದ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ  600 ಮೀಟರ್ ನಲ್ಲಿ ಬೆಳ್ಳಿ ಪದಕ ಪಡೆದು ಹರಿಯಾಣದಲ್ಲಿ ನಡೆಯುವ ರಾಷ್ಟ್ರ  ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.  ಸಚಿತ್ ಕಂಚಿನ ಪದಕ ಪಡೆದುಕೊಂಡಿದ್ದಾರೆ.

LEAVE A REPLY

Please enter your comment!
Please enter your name here