ಕೆಯ್ಯೂರು ಶ್ರೀದುರ್ಗಾ ಸ್ಪೋರ್ಟ್ಸ್ ಕ್ಲಬ್‌ನಿಂದ ಕೆಪಿಎಲ್ ಸೀಸನ್-2 ಕ್ರಿಕೆಟ್ ಪಂದ್ಯಾಟ, ಅಭಿನಂದನೆ, ಸನ್ಮಾನ

0

ಕೆಯ್ಯೂರ: ಕೆಯ್ಯೂರು ಶ್ರೀದುರ್ಗಾ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಕೆಪಿಎಲ್ ಸೀಸನ್-2 ಕ್ರಿಕೆಟ್ ಪಂದ್ಯಾಟದ ಅಭಿನಂದನ ಸಭೆ ಮತ್ತು ಸನ್ಮಾನ ಕಾರ್ಯಕ್ರಮ ನ.11 ರಂದು ಕೆಯ್ಯೂರು ಕೆಪಿಎಸ್ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.

ಕೆಯ್ಯೂರು ದೇವಳದ ವ್ಯವಸ್ಥಾಪನಾ ಸಮಿತಿ ಅದ್ಯಕ್ಷ ಶಶಿಧರ ರಾವ್ ಬೊಳಿಕಲ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕೆದಂಬಾಡಿ ಗ್ರಾ.ಪಂ.ಮಾಜಿ ಅದ್ಯಕ್ಷ ಎ.ಕೆ.ಜಯರಾಮ ರೈ ಕೆಯ್ಯೂರು, ಕೆ.ಪಿ.ಎಸ್ ಕೆಯ್ಯೂರು ಪ್ರಾಂಶುಪಾಲ ಇಸ್ಮಾಯಿಲ್, ಇಂಡಿಯನ್ ರೈಲ್ವೇಸ್ ಮಂಗಳೂರು ಅಶ್ವಥ್ ಕೆ.ಎಸ್, ರಾಷ್ಟ್ರಮಟ್ಟದ ಕಬಡ್ಡಿ ಆಟಗಾರ ಸತ್ಯನ್ ಡಿ.ಜಿ, ವಕೀಲ ನವೀನ್ ಕುಮಾರ್ ಶೆಟ್ಟಿ ಭಾಗವಹಿಸಿದ್ದರು. ಗೌರವ ಸಲಹೆಗಾರರಾಗಿ ಕೆಯ್ಯೂರು ಗ್ರಾ.ಪಂ.ಸದಸ್ಯರಾದ ಜಯಂತ ಪೂಜಾರಿ ಕೆಂಗುಡೇಲು, ಅಬ್ದುಲು ಖಾದರ್ ಮೇರ್ಲ, ನಿವೃತ್ತ ಬಿ.ಎಸ್.ಎನ್.ಎಲ್ ಅಧಿಕಾರಿ ಬಾಲಕೃಷ್ಣ ರೈ ಮಾಡಾವು, ಕೆಪಿಎಸ್ ಕೆಯ್ಯೂರು ಮುಖ್ಯಗುರು ಬಾಬು ಎಂ, ಶ್ರೀದುರ್ಗಾ ಸ್ಪೋರ್ಟ್ಸ್ ಕ್ಲಬ್ ಗೌರವ ಸಲಹೆಗಾರ ಹುಸೈನಾರ್ ಸಂತೋಷ್ ನಗರ, ವಿದ್ಯಾಮಾತಾ ಅಕಾಡಮಿ ಪುತ್ತೂರು ಭಾಗ್ಯೇಶ್ ರೈ ಎ.ಕೆ, ಕೃಷ್ಣ ಸಾಮಾನಿ ಕೆಯ್ಯೂರು, ದಿವಾಕರ ಪೂಜಾರಿ ಪಲ್ಲತ್ತಡ್ಕ, ಕೆಯ್ಯೂರು ಶ್ರೀದುರ್ಗಾ ಸ್ಪೋರ್ಟ್ಸ್ ಕ್ಲಬ್ ಮಾಜಿ ಅಧ್ಯಕ್ಷ ಸತೀಶ್ ರೈ ದೇವಿನಗರ, ಪ್ರಸನ್ನ ಕೆಂಗುಡೇಲು, ಶರತ್ ಕುಮಾರ್ ರೈ ದೇರ್ಲ ಉಪಸ್ಥಿತರಿದ್ದರು.



ತಂಡದ ಮಾಲಿಕರಾದ ಸಹಜ್ ರೈ ಬಳಜ್ಜ, ಸಂದೀಪ್ ರೈ ನಂಜೆ, ಮನೋಜ್ ರೈ ಮಾಡಾವು, ದೀಪಕ್ ರೈ ಮಾಡಾವು, ಸತೀಶ್ ರೈ ದೇವಿನಗರ, ಚಂದ್ರಶೇಖರ ರೈ ಸಣಂಗಳ, ಸುರೇಶ್ ರೈ ಪಿದಪಟ್ಲ, ಶರತ್ ಕುಮಾರ್ ಮಾಡಾವು, ಪ್ರಸನ್ನ ಕುಮಾರ್ ಎಂ.ಪಿ ಮಾಡಾವು, ಅನೀಸ್ ಸಂತೋಷ್ ನಗರ, ನಾಸಿರ್ ಮಾಡಾವು, ಅಶ್ವಥ್ ಕೆ.ಎಸ್ ಕಣಿಯಾರು, ಅಶೋಕ್ ಕೆ.ಎಸ್ ಕಣಿಯಾರು, ರವೀಂದ್ರ ಕೆ.ಎಸ್ ಕಣಿಯಾರು, ಕೃಷ್ಣ ಪ್ರಸಾದ್ ರೈ ಕಣಿಯಾರು, ವೀನಿತ್ ರೈ ದೇರ್ಲ, ಶರತ್ ಕುಮಾರ್ ರೈ ದೇರ್ಲ, ದಿನೇಶ್ ಕೆ.ಎಸ್, ದೀಪಕ್ ಕೆ.ಎಸ್, ಪ್ರಶಾಂತ್ ಕುಮಾರ್, ಗುಣಪಾಲ ಎಂ.ಎಸ್, ಹರಿಪ್ರಸಾದ್ ರೈ ಜಿ, ಪ್ರೀತಂ ರೈ ಬೊಳಿಕಲಿವರಿಗೆ ಸ್ಮರಣಿಕೆ, ಶಾಲು ನೀಡಿ ಸನ್ಮಾನಿಸಲಾಯಿತು. ತಂಡದ ಸದಸ್ಯರು ಉಪಸ್ಥಿತರಿದ್ದರು. ಕ್ಲಬ್‌ನ ಗೌರವ ಸಲಹೆಗಾರ ತಾರಾನಾಥ ರೈ ಕೊಡಂಬು ಸ್ವಾಗತಿಸಿ, ಕೃಷ್ಣಪ್ರಸಾದ್ ರೈ ಕಣಿಯಾರು ವಂದಿಸಿದರು.

 

LEAVE A REPLY

Please enter your comment!
Please enter your name here