ಉಪ್ಪಿನಂಗಡಿ ಯುವವಾಹಿನಿ ಘಟಕದಿಂದ ಬೆಳ್ಳಿಬೆಳಕು-2022, ಘಟಕದ ಮಾಜಿ ಅಧ್ಯಕ್ಷರ ಮನೆ ಭೇಟಿ, ಭಜನೆ, ಗುರುಸ್ಮರಣೆ

0

ಉಪ್ಪಿನಂಗಡಿ : ಯುವವಾಹಿನಿ ಉಪ್ಪಿನಂಗಡಿ ಘಟಕವು 25 ಸಂವತ್ಸರಗಳನ್ನು ಪೊರೈಸಿದ ಸವಿನೆನಪಿಗಾಗಿ ಘಟಕದ ಮಾಜಿ ಅಧ್ಯಕ್ಷರ ಮನೆ ಭೇಟಿಯ ಅಂಗವಾಗಿ ನಡೆಯುವ ಭಜನೆ ಮತ್ತು ಗುರುಸ್ಮರಣೆ ಕಾರ್ಯಕ್ರಮದ 16ನೇ ಕಾರ್ಯಕ್ರಮ ಯುವವಾಹಿನಿ ಉಪ್ಪಿನಂಗಡಿ ಘಟಕದ ಮಾಜಿ ಅಧ್ಯಕ್ಷ ಡಾ.ರಾಜಾರಾಮ್ ಕೆ.ಬಿ.ರವರ ರಾಮನಿವಾಸ ಮನೆಯಲ್ಲಿ ನಡೆಯಿತು. ಭಜನಾ ಕಾರ್ಯಕ್ರಮ ನಡೆದು ಬಳಿಕ ಗುರುಸ್ಮರಣೆ ಕಾರ್ಯಕ್ರಮವನ್ನು ಘಟಕದ ಮಾಜಿ ಅಧ್ಯಕ್ಷ ಹಾಗೂ ಶ್ರೀ ಗುರುದೇವ ಕಾಲೇಜಿನ ಪ್ರಾಂಶುಪಾಲ ಕೃಷ್ಣಪ್ಪ ಪೂಜಾರಿ ಬೆಳ್ತಂಗಡಿ ನಡೆಸಿಕೊಟ್ಟರು.

ಯುವವಾಹಿನಿ ಉಪ್ಪಿನಂಗಡಿ ಘಟಕವನ್ನು ತಮ್ಮ ಅಧ್ಯಕ್ಷಾವಧಿಯಲ್ಲಿ ಯಶಸ್ವಿಯಾಗಿ ಮುನ್ನಡೆಸಿದ ಡಾ. ರಾಜಾರಾಮ್ ಕೆ.ಬಿ. ಮತ್ತು ಡಾ.ರಮ್ಯಾ ರಾಜರಾಮ್ ದಂಪತಿಯನ್ನು ಅವರ ಮಕ್ಕಳಾದ ರಿಷಿಕೇಶ್, ರಿತೇಶ್, ರಿತೀಶಾ, ಅತ್ತೆ ಸುಶೀಲಾ ಸುಧೀರ್ ಮತ್ತು ಅಕ್ಕ ಭಾವನವರೊಂದಿಗೆ ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಗೌರವ ಸ್ವೀಕರಿಸಿ ಮಾತನಾಡಿದ ಡಾ.ರಾಜಾರಾಮ್ ಕೆ.ಬಿ.ಯವರು ಯುವವಾಹಿನಿಯ ಜೊತೆಗಿನ ಒಡನಾಟ ತನ್ನ ಜೀವನದಲ್ಲಿ ದೊರೆತ ಅತ್ಯಮೂಲ್ಯ ಅವಕಾಶ ಎಂದು ಹೇಳಿ ತಮ್ಮ ಅಧ್ಯಕ್ಷಾವಧಿಯಲ್ಲಿ ಘಟಕವನ್ನು ಅತ್ಯುತ್ತಮ ಮಟ್ಟದಲ್ಲಿ ನಡೆಸಲು ಸಹಕರಿಸಿದ ಸರ್ವರ ಸಹಕಾರವನ್ನು ನೆನಪಿಸಿದರು. ಯುವವಾಹಿನಿಯ “ಬೆಳ್ಳಿ ಬೆಳಕಿನ ಚಿತ್ತಾರ” ಕಾರ್ಯಕ್ರಮಕ್ಕೆ ಸುಡುಮದ್ದಿನ ವ್ಯವಸ್ಥೆಯನ್ನು ಮಾಡಿದ ಘಟಕದ ಮಾಜಿ ಅಧ್ಯಕ್ಷ ಚಂದ್ರಶೇಖರ್ ಸನೀಲ್ ರೂಪಲತಾ ದಂಪತಿಯನ್ನು ಗೌರವಿಸಲಾಯಿತು. ಘಟಕದ ಸದಸ್ಯೆ, ಭಜನಾರ್ಥಿ ಶ್ರೀಲಕ್ಷ್ಮೀ ರವರ ಹುಟ್ಟುಹಬ್ಬ ಆಚರಿಸಲಾಯಿತು.


ಘಟಕದ ಗೌರವ ಸಲಹೆಗಾರ ವರದರಾಜ್ ಎಂ, ಘಟಕದ ಅಧ್ಯಕ್ಷ ಕುಶಾಲಪ್ಪ ಹತ್ತು ಕಳಸೆ, ಮಾಜಿ ಅಧ್ಯಕ್ಷ ಕೃಷ್ಣಪ್ಪ ಪೂಜಾರಿ, ಗುಣಕರ್ ಅಗ್ನಾಡಿ, ಅಜಿತ್ ಕುಮಾರ್ ಪಾಲೇರಿ, ಕೃಷ್ಣಪ್ಪ ಪೂಜಾರಿ, ಚಂದ್ರಶೇಖರ್ ಸನೀಲ್, ಆಶಿತ್ ಎಂ.ವಿ,ನವೀನ್ ಪಡ್ಪು, ಜಯಾನಂದ ಕಲ್ಲಾಪು, ರವೀಂದ್ರ ದಲ್ಕಾಜೆ, ಜಯವಿಕ್ರಮ್ ಕಲ್ಲಾಪು, ಜನಾರ್ದನ ನೂಜಿ, ಡೀಕಯ್ಯ ಗೌಂಡತ್ತಿಗೆ, ಸುಂದರ ಎಲಿಯ, ಅಶೋಕ್ ಕುಮಾರ್ ಪಡ್ಪು, ಲೋಕೇಶ್ ಬೆತ್ತೋಡಿ, ಹರೀಶ್ ಕುಮಾರ್ ಪಾಲೆತ್ತಡಿ ವಸುಮತಿ ಡೆಂಬಲೆ, ಚಂದ್ರಕಲಾ ದಾಸರಮೂಲೆ, ಹಿರಿಯರಾದ ವೆಂಕಪ್ಪ ಪೂಜಾರಿ, ಡೀಕಯ್ಯ ಚೆಂಡೆತ್ತಿಮಾರ್, ಬೊಮ್ಮಯ್ಯ ಬಂಗೇರ, ವಿಮಲಾ ವರದರಾಜ್ ಎಂ., ಘಟಕದ ಕಾರ್ಯದರ್ಶಿ ಉದಯ್ ಪೂಜಾರಿ, ಜೊತೆ ಕಾರ್ಯದರ್ಶಿ ಅನಿತಾ ಸತೀಶ್ , ಘಟಕದ ಉಪಾಧ್ಯಕ್ಷ ಮನೋಹರ್ ಆಟಲ್, ಮನೋಜ್ ಸಾಲಿಯಾನ್, ಪದಾಧಿಕಾರಿಗಳಾದ ನಾಣ್ಯಪ್ಪ ಕೋಟ್ಯಾನ್, ಉಮೇಶ್, ಮನೋಹರ್ ಕೆಳಗಿನಮನೆ, ಮಾಧವ ಪೂಜಾರಿ, ರಕ್ಷಾ ಎಚ್.ಎಸ್, ತುಳಸೀಧರ್ ಬೆನೆಪ್ಪು, ಅಂಕಿತ್ ಪೂಜಾರಿ, ಕೋಡಿಂಬಾಡಿ ಗ್ರಾಮ ಪಂಚಾಯತ್ ಸದಸ್ಯ ಜಯಪ್ರಕಾಶ್ ಬದಿನಾರು, ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನದ ಸದಸ್ಯ ಹರಿನಾರಾಯಣ ಯು.ರಾಮ, ಬೆಳ್ಳಿಪ್ಪಾಡಿ ಬಿಲ್ಲವ ಗ್ರಾಮ ಸಮಿತಿಯ ಅಧ್ಯಕ್ಷ ವಸಂತ್ ಪೂಜಾರಿ,ಹಿರೇಬಂಡಾಡಿ ಬಿಲ್ಲವ ಗ್ರಾಮ ಸಮಿತಿಯ ಅಧ್ಯಕ್ಷ ವಸಂತ ಕಜೆ, ಘಟಕದ ಸದಸ್ಯ ರಮ್ಯಾ ರಾಜರಾಮ್, ಶ್ವೇತಾ ಆಶಿತ್, ನಯನಾ ಮನೋಹರ್, ರೂಪಲತಾ ಚಂದ್ರಶೇಖರ್, ಚಂದ್ರಶೇಖರ್ ಕಾರೆದಕೋಡಿ, ತನಿಯಪ್ಪ ಪೂಜಾರಿ, ಗಂಗಾಧರ್ ಪುರಿಯ, ರವೀಂದ್ರ ಪುರಿಯ, ಶ್ರೀಧರ ಪೂಜಾರಿ, ಸವಿತಾ ಹರೀಶ್, ರಮೇಶ್ ಸಾಂತ್ಯ, ರಕ್ಷಿತ್ ಪೂಜಾರಿ, ವಿಕ್ರಮ್ ಪೂಜಾರಿ, ವರ್ಷ, ಮೇಷಾ, ರಿಶಿತಾ, ಅಕ್ರತಿ, ಧೃಣಿತಾ, ಅಭಿಜ್ಞಾ, ಶ್ರೀಲಕ್ಷ್ಮೀ, ವಿನುಷಾ, ದೇವಿಕೃಪಾ, ಬೇಬಿ ಸಾನಿಧ್ಯ, ಧ್ರುವ, ಧ್ರುವಿ, ಕೃತಿಕ್, ಅಂಶುಲ್ ರಾಜ್, ಸಂತೋಷ್ ಕೆಳಗಿನಮನೆ, ಮಧುಕರ ಕೆಳಗಿನಮನೆ, ಚೇತನ್ ಪೊಲ್ಲಕೋಡಿ, ಅಕ್ಷಯ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಘಟಕದ ಅಧ್ಯಕ್ಷ ಕುಶಾಲಪ್ಪ ಹತ್ತುಕಳಸೆ ಸ್ವಾಗತಿಸಿ, ಘಟಕದ ಉಪಾಧ್ಯಕ್ಷ ಮನೋಹರ್ ಆಟಲ್ ವಂದಿಸಿದರು. ಘಟಕದ ಮಾಜಿ ಅಧ್ಯಕ್ಷ ಲೋಕೇಶ್ ಬೆತ್ತೋಡಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here