ಕೋಡಿಂಬಾಡಿಯಲ್ಲಿ ಯುವಕನಿಗೆ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿದ್ದ ಆರೋಪ: ಐವರಿಗೆ ಜಾಮೀನು ಮಂಜೂರು

0

ಪುತ್ತೂರು: ಕೋಡಿಂಬಾಡಿ ಗ್ರಾಮ ಪಂಚಾಯತ್ ಕಛೇರಿ ಬಳಿಯ ಮೋಹನ ಗೌಡ ಎಂಬವರ ಮನೆಯ ಕೆಲಸದಾಳುವಾಗಿರುವ ಹಿರೇಬಂಡಾಡಿ ಕರೆಂಕಿಯ ಸುರೇಶ್ ಕೆ. ಎಂಬವರಿಗೆ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿರುವ ಹತ್ತು ಆರೋಪಿಗಳ ಪೈಕಿ ಐವರಿಗೆ ಪುತ್ತೂರು ನ್ಯಾಯಾಲಯ ನ.14 ರಂದು ಜಾಮೀನು ಮಂಜೂರು ಮಾಡಿದೆ.
ನ.9ರಂದು ರಾತ್ರಿ ವೇಳೆ ಸುರೇಶ್‌ರವರಿಗೆ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿದ ಆರೋಪದಡಿ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ನ.10ರಂದು ಕೇಸು ದಾಖಲಾಗಿತ್ತು. ಆರೋಪಿಗಳ ಪೈಕಿ ಶೇಖರ ಪೂಜಾರಿ, ಸುರೇಶ್, ಅಶೋಕ್, ರತ್ನಾಕರ ಮತ್ತು ಕೃಷ್ಣಪ್ಪರವರು ನ್ಯಾಯಾಲಯಕ್ಕೆ ಶರಣಾಗಿದ್ದು ನ್ಯಾಯಾಧೀಶ ಗೌಡ ಆರ್.ಪಿ. ಅವರು ಜಾಮೀನು ಮಂಜೂರು ಮಾಡಿದ್ದಾರೆ. ಆರೋಪಿಗಳ ಪರ ನ್ಯಾಯವಾದಿಗಳಾದ ದೇವಾನಂದ ಕೆ, ಮಿಥುನ್ ರೈ ಮತ್ತು ಕು. ಹರಿಣಿ ವಾದಿಸಿದ್ದರು. ಇದೇ ಪ್ರಕರಣದಲ್ಲಿ ಆರೋಪಿಗಳಾಗಿರುವ ಮನೋಜ್, ಉಮೇಶ್, ಪ್ರಮೋದ್, ಉಮೇಶ್ ಮತ್ತು ಪ್ರದೀಪ್ ಅವರಿಗೆ ಇನ್ನಷ್ಟೇ ಜಾಮೀನು ಮಂಜೂರಾಗಬೇಕಿದೆ.

LEAVE A REPLY

Please enter your comment!
Please enter your name here