ಕೋಚಕಟ್ಟೆ ಮದ್ರಸದಲ್ಲಿ ಮೊಯ್ಯಿದ್ದೀನ್ ರಾತೀಬ್, ಉಮ್ರಾ ಯಾತ್ರೆ ಕೈಗೊಳ್ಳುತ್ತಿರುವ ಅಯ್ಯೂಬ್‌ರವರಿಗೆ ಸನ್ಮಾನ

0

ಪೆರಾಬೆ: ಕಡಬ ತಾಲೂಕಿನ ಕುಂತೂರು ಗ್ರಾಮದ ಕೋಚಕಟ್ಟೆ ಮದ್ರಸದಲ್ಲಿ ಗೌಸುಲ್ ಆಹ್‌ಳಮ್ ಮೊಯ್ಯಿದ್ದೀನ್ ಅಬ್ದುಲ್ ಖಾದರ್ ಜಿಲಾನಿ(ಖ.ಅ)ರವರ ಹೆಸರಿನಲ್ಲಿ ಪ್ರತಿ ವರ್ಷ ನಡೆಸಿಕೊಂಡು ಬರುವ ಮೊಯ್ಯಿದ್ಧೀನ್ ರಾತೀಬ್ ನ.13ರಂದು ರಾತ್ರಿ ಕುಂತೂರು ಮಸೀದಿ ಮುದರ್ರಿಸ್ ಹಾಜಿ ಮೊಯಿದು ಫೈಝಿ ಉಸ್ತಾದರ ನೇತೃತ್ವದಲ್ಲಿ ನಡೆಯಿತು.

ಪವಿತ್ರ ಉಮ್ರಾ ಕರ್ಮವನ್ನು ನಿರ್ವಹಿಸಲು ತೆರಳುತ್ತಿರುವ ಮದ್ರಸದ ಮಾಜಿ ಉಪಾಧ್ಯಕ್ಷ ಅಯ್ಯೂಬ್ ಪಿ.ಎ. ಮರುವಂತಿಲರವರಿಗೆ ನೂರುಲ್ ಹುದಾ ಮದ್ರಸ ವತಿಯಿಂದ ಶಾಲು ಹೊದಿಸಿ ಗೌರವಿಸಲಾಯಿತು. ಮಸೀದಿ ಅಧ್ಯಕ್ಷರಾದ ಬಶೀರ್ ಕೆ.ಪಿ. ಅಧ್ಯಕ್ಷತೆ ವಹಿಸಿದ್ದರು. ಮದ್ರಸ ಉಸ್ತಾದರಾದ ಫಾರೂಕ್ ದಾರಿಮಿ ಸ್ವಾಗತಿಸಿದರು. ಕುಂತೂರು ಜಮಾಹತ್ ಉಸ್ತಾದರು, ಕುಂತೂರು ಮಸೀದಿ ಮಾಜಿ ಅಧ್ಯಕ್ಷರಾದ ಅಹ್ಮದ್ ಹಾಜಿ ಅಜ್ಮೀರ್, ಅಬ್ಬಾಸ್ ಕೆಎಸ್‌ಆರ್‌ಟಿಸಿ, ಕುಂತೂರು ಮಸೀದಿ ಪ್ರಧಾನ ಕಾರ್ಯದರ್ಶಿ ಯಾಕೂಬ್ ಕೆ, ಸದಸ್ಯರಾದ ಇಸ್ಮಾಯಿಲ್ ಅಲ್ ಅಮೀನ್, ಹಮೀದ್ ಅಜ್ಮೀರ್, ಬಶೀರ್ ಮಶ್ರೀಕ್, ಮದ್ರಸ ಮಾಜಿ ಅಧ್ಯಕ್ಷ ಅಬ್ಬಾಸ್ ಕಟ್ಲೇರಿ, ಗೊಳಿತ್ತೊಟ್ಟು ಮಸೀದಿ ಖತೀಬರಾದ ಹನೀಫ್ ದಾರಿಮಿ, ಕುಂತೂರು ದರ್ಸ್ ವಿದ್ಯಾರ್ಥಿಗಳು, ಮದ್ರಸದ ಆಡಳಿತ ಸಮಿತಿ ಸದಸ್ಯರು, ನೂರಾರು ದೀನಿ ಪ್ರೇಮಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here