ರಾಮಕುಂಜ: ಅಂಗನವಾಡಿ ಮೆಟ್ಟಿಲಿನಲ್ಲಿ ಬಿಯರ್ ಬಾಟ್ಲಿ ಚೂರು-ಪೊಲೀಸರಿಗೆ ದೂರು

0

ರಾಮಕುಂಜ: ಇಲ್ಲಿನ ಅಂಗನವಾಡಿ ಕೇಂದ್ರದ ಮೆಟ್ಟಿಲಿನ ಮೇಲೆ ಬಿಯರ್ ಬಾಟ್ಲಿ ಚೂರು ಹಾಕಿರುವ ಬಗ್ಗೆ ಅಂಗನವಾಡಿ ಕಾರ್ಯಕರ್ತೆ ಯಮುನಾ ಅವರು ಕಡಬ ಪೊಲೀಸರಿಗೆ ದೂರು ನೀಡಿದ್ದಾರೆ. ರಾಮಕುಂಜ ಅಂಗನವಾಡಿ ಕೇಂದ್ರದ ಶಾಲಾ ಮೆಟ್ಟಿಲಿನ ಮೇಲೆ ನ.14ರಂದು ಬಿಯರ್ ಬಾಟ್ಲಿ ಒಡೆದು ಅದರ ಚೂರುಗಳನ್ನು ಮೆಟ್ಟಿಲಿನ ಮೇಲೆ ಚೆಲ್ಲಾಪಿಲ್ಲಿ ಮಾಡಲಾಗಿದೆ. ಈ ಹಿಂದೆ ನ.9ರಂದು ಸಹ ಇದೇ ರೀತಿ ಮಾಡಲಾಗಿತ್ತು. ಈ ಅಂಗನವಾಡಿ ಕೇಂದ್ರಕ್ಕೆ ಸುಮಾರು 25 ಚಿಕ್ಕ ಚಿಕ್ಕ ಮಕ್ಕಳು ಬರುತ್ತಿದ್ದು ಬಿಯರ್ ಬಾಟ್ಲಿಯ ಚೂರುಗಳು ಚೆಲ್ಲಾಪಿಲ್ಲಿಯಾಗಿ ಹರಡಿರುವುದರಿಂದ ಮಕ್ಕಳಿಗೆ ನಡೆದಾಡಲು ಕಷ್ಟವಾಗುತ್ತಿದೆ. ಆದ್ದರಿಂದ ಈ ಬಗ್ಗೆ ತನಿಖೆ ನಡೆಸಿ ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ನ್ಯಾಯ ಒದಗಿಸಿಕೊಡುವಂತೆ ಅಂಗನವಾಡಿ ಕಾರ್ಯಕರ್ತೆ ಯಮುನಾ ಕೆ.,ಅವರು ಕಡಬ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here