ಸವಣೂರು ಅಲ್ ಅನ್ಸಾರ್ ಚಾರಿಟೇಬಲ್ ಟ್ರಸ್ಟ್‌ಗೆ ಪದಾಧಿಕಾರಿಗಳ ಆಯ್ಕೆ

0

ಅಧ್ಯಕ್ಷರಾಗಿ ರಫೀಕ್ ಟಾಸ್ಕೋ, ಕಾರ್ಯದರ್ಶಿಯಾಗಿ ಆಸಿಫ್ ಆಯ್ಕೆ

ಪುತ್ತೂರು: ಅಲ್ ಅನ್ಸಾರ್ ಚಾರಿಟೇಬಲ್ ಟ್ರಸ್ಟ್ ಸವಣೂರು ಇದರ ಮಹಾಸಭೆ ಸವಣೂರು ಸಹಲ್ ಕಾಂಪ್ಲೆಕ್ಸ್‌ನಲಿರುವ ಸಮಿತಿಯ ಕಚೇರಿಯಲ್ಲಿ ನಡೆಯಿತು. ರಫೀಕ್ ಟಾಸ್ಕೋ ಅಧ್ಯಕ್ಷತೆ ವಹಿಸಿದ್ದರು.


ಸವಣೂರು ಗ್ರಾ.ಪಂ ಸದಸ್ಯ ಅಬ್ದುಲ್ ರಝಾಕ್ ಕೆನರಾ, ಅಲ್‌ನೂರು ಮುಸ್ಲಿಂ ಯೂತ್ ಫೆಡರೇಶನ್ ಇದರ ಅಧ್ಯಕ್ಷ ಝಕರಿಯಾ ಮಾಂತೂರು, ಹನೀಫ್ ಎಂ.ಎಚ್, ರಝಾಕ್ ಎಸ್.ಆರ್, ಅಶ್ರಫ್ ಕಂಪ, ನಝೀರ್ ಸಿ.ಎ, ಮುಂತಾದವರು ಉಪಸ್ಥಿತರಿದ್ದರು. ಸಭೆಯಲ್ಲಿ ಮುಂದಿನ ವರ್ಷದ ಪದಾಧಿಕಾರಿಗಳ ಆಯ್ಕೆ ನಡೆಯಿತು.
ಗೌರವಾಧ್ಯಕ್ಷರಾಗಿ ಅಬ್ದುಲ್ ಖಾದರ್ ಹಾಜಿ ಅವರನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ರಫೀಕ್ ಟಾಸ್ಕೋ, ಉಪಾಧ್ಯಕ್ಷರಾಗಿ ಅಶ್ರಫ್ ಬಿ.ಸಿ ಮತ್ತು ಅನ್ಸಾರ್ ಆರಿಗಮಜಲು, ಕಾರ್ಯದರ್ಶಿಯಾಗಿ ಆಸೀಫ್ ರಾಜಧಾನಿ ಅವರನ್ನು ಆಯ್ಕೆ ಮಾಡಲಾಯಿತು. ಜತೆ ಕಾರ್ಯದರ್ಶಿಗಳಾಗಿ ಸವಾದ್ ಪಟ್ಟೆ ಹಾಗೂ ಝಹೀರ್ ಅಬ್ಬಾಸ್,
ಕೋಶಾಧಿಕಾಯಾಗಿ ಹನೀಫ್ ಎಂ.ಎಚ್ ಆಯ್ಕೆಯಾದರು. ಸಲಹಾ ಸಮಿತಿ ಸದಸ್ಯರಾಗಿ ಜಲೀಲ್ ಫೈಝಿ, ಅಶ್ರಫ್ ಖಾನ್ ಮಾಂತೂರು, ಬಶೀರ್ ಚಡವು, ಅಬ್ದುಲ್ ರಝಾಕ್ ಕೆನರಾ, ನಝೀರ್ ಸಿ.ಎ ಅವರನ್ನು ಆಯ್ಕೆ ಮಾಡಲಾಯಿತು. ಲೆಕ್ಕ ಪರಿಶೋಧಕರಾಗಿ ಝಕರಿಯ ಮಾಂತೂರು ಆಯ್ಕೆಯಾದರು. ಅಲ್ಲದೆ ಕಾರ್ಯಕಾರಿ ಸಮಿತಿಗೆ ಸದಸ್ಯರನ್ನು ಆಯ್ಕೆ ಮಾಡಲಾಯಿತು.
ಸಫ್ವಾನ್ ಸವಣೂರು ಸ್ವಾಗತಿಸಿದರು. ಯಾಕೂಬ್ ಸವಣೂರು ವಂದಿಸಿದರು.

LEAVE A REPLY

Please enter your comment!
Please enter your name here