ಕೂರ ಅಂಗನವಾಡಿ ಕೇಂದ್ರದಲ್ಲಿ ಚಿಣ್ಣರ ಸಂಭ್ರಮ

0

ಕಾಣಿಯೂರು: ಕುದ್ಮಾರು ಗ್ರಾಮದ ಕೂರ ಅಂಗನವಾಡಿ ಕೇಂದ್ರದಲ್ಲಿ ಚಿಣ್ಣರ ಸಂಭ್ರಮ ಕಾರ್ಯಕ್ರಮ ನಡೆಯಿತು.

ಬೆಳಂದೂರು ಗ್ರಾ.ಪಂ.ಅಧ್ಯಕ್ಷ ಲೋಹಿತಾಕ್ಷ ಕೆಡೆಂಜಿಕಟ್ಟ ಉದ್ಘಾಟಿಸಿದರು. ಬಾಲವಿಕಾಸ ಸಮಿತಿ ಅಧ್ಯಕ್ಷರಾದ ನವ್ಯಾ ಅನ್ಯಾಡಿ, ಗ್ರಾ.ಪಂ.ಸದಸ್ಯೆ ತಾರಾ ಅನ್ಯಾಡಿ, ಇಂದಿರಾವತಿ, ಬಾವು ನೂಜಿಲ್ತಡ್ಕ ಉಪಸ್ಥಿತರಿದ್ದರು.

ಶೋಭಲತಾ ಯಶೋಧರ್ ಅಟೋಟ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಿದರು. ಪುಟಾಣಿಗಳಾದ ತ್ರಿಷಾನ್ ಅನ್ಯಾಡಿ, ನಿಖಿಲ್‌ರಾಜ್ ನೂಜಿ, ಪ್ರಣಿತ್ ಕೆಡೆಂಜಿಕಟ್ಟ ನೆಹರುರವರ ಬಗ್ಗೆ ಭಾಷಣ ಮಾಡಿದರು. ಶೃತ, ಸಾನ್ವಿ, ಶನಯ ಪ್ರಾರ್ಥಿಸಿದರು. ಸಾನ್ವಿ ವಂದಿಸಿದರು. ಅಂಗನವಾಡಿ ಕಾರ್ಯಕರ್ತೆ ವಸಂತಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸಹಾಯಕಿ ಲಲಿತಾ ಸಹಕರಿಸಿದರು. ಕಾರ್ಯಕ್ರಮದಲ್ಲಿ ಸ್ತ್ರೀಶಕ್ತಿ ಸಂಘದ ಸದಸ್ಯರು, ಬಾಲವಿಕಾಸ ಸಮಿತಿ ಸದಸ್ಯರು, ಮಕ್ಕಳ ಪೋಷಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here