ಪೆರ್ಲಂಪಾಡಿ : ಹಿರಿಯ ಸಾಹಿತಿ ಎಸ್.ಜಿ.ಕೃಷ್ಣರವರ ಕೃತಿ ವಿಶ್ಲೇಷಣೆ, ಸಂವಾದ, ಕೃತಿ ಬಿಡುಗಡೆ

0

ಪುತ್ತೂರು : ಪೆರ್ಲಂಪಾಡಿಯ ಚೈತನ್ಯ ಅಭಿವ್ಯಕ್ತಿ ವೇದಿಕೆಯಿಂದ ಎಸ್.ಜಿ.ಕೃಷ್ಣರವರ ಕೃತಿ ವಿಶ್ಲೇಷಣೆ, ಸಂವಾದ ಹಾಗೂ ನೂತನ ಕೃತಿ ಬಿಡುಗಡೆ ಕೊಳ್ತಿಗೆ ಪ್ರಾ.ಕೃ.ಪ.ಸ.ಸಂಘದ ಸಭಾಭವನದಲ್ಲಿ ನಡೆಯಿತು.

ವೇದಿಕೆಯ ಅಧ್ಯಕ್ಷ ಕೆ.ಸೀತಾರಾಮ ಅಮಳ ಅಧ್ಯಕ್ಷತೆ ವಹಿಸಿದ್ದರು. ಸಂಘದ ಅಧ್ಯಕ್ಷ ಅಧ್ಯಕ್ಷ ಕೆ.ವಸಂತ ಕುಮಾರ್ ರೈರವರು ಹಿರಿಯ ಸಾಹಿತಿ ಎಸ್.ಜಿ.ಕೃಷ್ಣರವರ the spirit of the articles 29&30 as envisaged in the constitution of india ಕೃತಿಯನ್ನು ಅನಾವರಣಗೊಳಿಸಿ ಶುಭಹಾರೈಸಿದರು. ವೇದಿಕೆಯ ಸದಸ್ಯ ಶಿವರಾಮ ಅಮಳ ವಿಶ್ಲೇಷಕರಾಗಿ ಎಸ್.ಜಿ.ಕೃಷ್ಣರವರ minorities and educational rights ಕೃತಿಯ ಕುರಿತು ಮಾಹಿತಿ ನೀಡಿ ಸಂವಾದ ಕಾರ್ಯಕ್ರಮ ನಡೆಸಿದರು. ಕೃತಿಕಾರ ಎಸ್.ಜಿ.ಕೃಷ್ಣ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವೇದಿಕೆಯ ಕಾರ್ಯದರ್ಶಿ ವಿಷ್ಣು ಭಟ್ ಎಕ್ಕಡ್ಕ ಸ್ವಾಗತಿಸಿದರು. ಸದಸ್ಯ ಕೆ.ದಿವಾಕರ ರೈ ಕಜೆಮೂಲೆ ವಂದಿಸಿದರು.

LEAVE A REPLY

Please enter your comment!
Please enter your name here