ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲ : ಚಿಣ್ಣರ ಕ್ರೀಡೋತ್ಸವ-2022

0

ಪುತ್ತೂರು:ನ.18ರಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲ ಇಲ್ಲಿ ಎಳೆಯ ಮಕ್ಕಳಲ್ಲಿ ಚೈತನ್ಯ ತುಂಬುವ ಸಲುವಾಗಿ  ಪೂರ್ವ ಪ್ರಾಥಮಿಕ ವಿಭಾಗ – ಎಲ್.ಕೆ.ಜಿ ಮತ್ತು ಯು.ಕೆ.ಜಿ ಮಕ್ಕಳಿಗೆ ಹಾಗೂ 1ನೇ ಯಿಂದ 4ನೇ ತರಗತಿಯ ಪುಟಾಣಿ ಮಕ್ಕಳಿಗೆ ಚಿಣ್ಣರ ಕ್ರೀಡೋತ್ಸವ-2022 ವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ  ಶಾಂತಿ ಶೆಣೈ ಉದ್ಘಾಟಿಸಿ, ಪುಟಾಣಿ ಮಕ್ಕಳಿಗೆ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾದ ಡಾ.ಶಿವಪ್ರಕಾಶ್.ಎಂ ವಹಿಸಿ ,ಕ್ರೀಡೆಯಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು, ಸದೃಢ ಶರೀರವನ್ನು ಪಡೆದು ಸತ್ಪ್ರಜೆಗಳಾಗಲು ಕ್ರೀಡೆ ಪೂರಕ ಎಂದು ಹೇಳಿ ಪುಟಾಣಿ ಮಕ್ಕಳಿಗೆ ಶುಭ ಕೋರಿದರು.

ನಂತರ ಪುಟಾಣಿ ಮಕ್ಕಳಿಂದ ಆಕರ್ಷಕ ಪಥಸಂಚಲನ ನಡೆಯಿತು. ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿ ಸಂಚಾಲಕ  ರವಿನಾರಾಯಣ.ಎಂ, ರಕ್ಷಕ-ಶಿಕ್ಷಕ ಸಂಘದ ನಿಕಟ ಪೂರ್ವ ಅಧ್ಯಕ್ಷರಾದ  ಜಯಕುಮಾರ್ ಜೈನ್ ಹಾಗೂ ಹಿರಿಯ ದೈಹಿಕ ಶಿಕ್ಷಣ ಶಿಕ್ಷಕರಾದ  ಭಾಸ್ಕರ ಗೌಡ ಉಪಸ್ಥಿತಸಿದ್ದರು. ಸಂಧ್ಯಾ ಸ್ವಾಗತಿಸಿ, ಪೂರ್ವಪ್ರಾಥಮಿಕ ವಿಭಾಗದ ಮುಖ್ಯಸ್ಥೆ ಮಮತಾ ವಂದಿಸಿ,ಸಹನಾ ಪೈ ಕಾರ್ಯಕ್ರಮ ನಿರೂಪಿದರು.

LEAVE A REPLY

Please enter your comment!
Please enter your name here