ರಾಜ್ಯಮಟ್ಟದ ಮಕ್ಕಳ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಧನ್ವಿ ರೈ ಕೋಟೆ ಆಯ್ಕೆ

0

ಪುತ್ತೂರು : ಉಡುಪಿ ಜಿಲ್ಲೆಯ ಅಜೆಕಾರಿನ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿ ನೀಡುವ ರಾಜ್ಯಮಟ್ಟದ ಮಕ್ಕಳ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಧನ್ವಿ ರೈ ಕೋಟೆ ಆಯ್ಕೆ ಆಗಿದ್ದಾರೆ.

ಈ ಪ್ರಶಸ್ತಿಗೆ ಮುಂಬೈ, ಕಾಸರಗೋಡು ಸಹಿತ 33 ಮಕ್ಕಳನ್ನು ಆಯ್ಕೆ ಮಾಡಲಾಗಿದೆ. ಪಾಣಾಜೆ ವಿವೇಕ ಹಿರಿಯ ಪ್ರಾಥಮಿಕ ಶಾಲೆಯ 7 ನೇ ತರಗತಿಯ ವಿದ್ಯಾರ್ಥಿನಿಯಾದ ಇವರು ಪಾಣಾಜೆ ಗ್ರಾಮದ ಕೋಟೆ ಬಾರಿಕೆ ಯಜಮಾನ ಕಿಟ್ಟಣ್ಣ ರೈ ಮತ್ತು ಸುಂದರಿ ರೈರವರ ಮೊಮ್ಮಗಳಾಗಿದ್ದು ಕೋಟೆ ರವಿಶಂಕರ್ ರೈ ಮತ್ತು ವಿಜಯಲಕ್ಷ್ಮಿ ರೈ ದಂಪತಿಯ ಪುತ್ರಿಯಾಗಿದ್ದಾರೆ ಎಂದು ಸಮಿತಿ ಅಧ್ಯಕ್ಷ ಡಾ.ಶೇಖರ್ ಅಜೆಕಾರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here