ಮಂಗಳೂರು ಕೃಷಿಕರ ಸಹಕಾರ ಸಂಘ ‘ಮಾಸ್’ದ ಉಪಾಧ್ಯಕ್ಷರಾಗಿ ಸವಣೂರು ಕೆ.ಸೀತಾರಾಮ ರೈ ಆಯ್ಕೆ

0

ಪುತ್ತೂರು: ಮಂಗಳೂರು ಕೃಷಿಕರ ಸಹಕಾರ ಸಂಘ (ಮಾಸ್ ಲಿಮಿಟೆಡ್)ದ ಆಡಳಿತ ಮಂಡಳಿಯ ಉಪಾಧ್ಯಕ್ಷರಾಗಿ ಹಿರಿಯ ಸಹಕಾರಿ ಧುರೀಣ ಸವಣೂರು ಕೆ.ಸೀತಾರಾಮ ರೈ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ನ.13 ರಂದು ಸಂಘದ ಕಛೇರಿಯಲ್ಲಿ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟುರವರ ಉಸ್ತುವಾರಿಯಲ್ಲಿ ಆಡಳಿತ ಮಂಡಳಿ ಚುನಾವಣೆ ನಡೆಯಿತು.

ಅಧ್ಯಕ್ಷರಾಗಿ ಭಾಸ್ಕರ ಎಸ್.ಕೋಟ್ಯಾನ್ ಇರ್ವತ್ತೂರು, ನಿರ್ದೇಶಕರುಗಳಾಗಿ ಸುಧಾ ಎಸ್.ರೈ ತೋಟದಡ್ಕ ಸವಣೂರು, ರಾಜರಾಮ ಶೆಟ್ಟಿ ಪುತ್ತೂರು, ಅಶೋಕ್ ಕುಮಾರ್ ಬಲ್ಲಾಳ್, ಶ್ರೀರಾಮ ಪಿ.ಸಿ, ನಾರಾಯಣ ನಾಯ್ಕ, ಬಿ.ಪ್ರದೀಪ್ ಯಡಿಯಾಳ, ಶ್ರೀಧರ ಜಿ.ಭಿಡೆ, ರಾಜೀವಿ ಆರ್.ರೈ, ಸುಂದರ ಗೌಡ ಇಚ್ಚಿಲ, ಪುಷ್ಪರಾಜ ಅಡ್ಯಂತಾಯ, ಶಿವಾಜಿ ಎಸ್.ಸುವರ್ಣ, ಟಿ.ರಾಘವ ಶೆಟ್ಟಿ, ಮೋನಪ್ಪ ಶೆಟ್ಟಿ, ಟಿ.ಜಿ ರಾಜಾರಾಮ ಭಟ್, ನಿತ್ಯಾನಂದ ಮುಂಡೋಡಿ ಎಂ.ಬಿ, ರಾಜಾರಾಮ ಶೆಟ್ಟಿ ಹಾಗೂ ಸತೀಶ್ ಕೆ.ರವರುಗಳು ಆಯ್ಕೆಯಾಗಿದ್ದಾರೆ. ಸುಧೀರ್ ಕುಮಾರ್ ಜೆ. ಚುನಾವಣಾ ರಿಟರ್ನಿಂಗ್ ಅಧಿಕಾರಿಯಾಗಿದ್ದರು.

LEAVE A REPLY

Please enter your comment!
Please enter your name here