ಕೆಮ್ಮಿಂಜೆ ದೇವಸ್ಥಾನದ ಷಷ್ಠಿ ಮಹೋತ್ಸವಕ್ಕೆ ಗೊನೆ ಮುಹೂರ್ತ

0

ಪುತ್ತೂರು: ಪುರಾತನ ಪ್ರಸಿದ್ದವಾದ ಕೆಮ್ಮಿಂಜೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ನ.28 ಹಾಗೂ 29ರಂದು ನಡೆಯಲಿರುವ ವಾರ್ಷಿಕ ಜಾತ್ರೋತ್ಸವ ‘ಷಷ್ಠಿ ಮಹೋತ್ಸವ’ಕ್ಕೆ ನ.22ರಂದು ಗೊನೆ ಮುಹೂರ್ತ ನೆರವೇರಿತು.

ದೇವಸ್ಥಾನದಲ್ಲಿ ಪೂಜೆ,‌ ವಿಶೇಷ ಪ್ರಾರ್ಥನೆ ಸಲ್ಲಿಸಿದ ಬಳಿಕ ದೇವಸ್ಥಾನದ ಬಳಿಯಿರುವ ಕೆಮ್ಮಿಂಜೆ ನಾಗೇಶ ತಂತ್ರಿಗಳ ತೋಟದಲ್ಲಿ ಗೊನೆ ಕಡಿಯಲಾಯಿತು. ಹಿರಿಯರಾದ ಸದಾಶಿವ ಮಡಂಬಡಿತ್ತಾಯ ಗೊನೆ ಮುಹೂರ್ತ ನೆರವೇರಿಸಿದರು.

ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಬಳ್ಳಕ್ಕುರಾಯ, ಸದಸ್ಯರಾದ ವಿಶ್ವನಾಥ ಗೌಡ, ಚಂದ್ರಶೇಖರ, ಪ್ರೇಮಲತಾ ರಾವ್, ವಿನುತಾ ಮೋಹನ್, ಅರ್ಚಕರಾದ ವೆಂಕಟೇಶ್ ಭಟ್, ರಮೇಶ್ ಭಟ್, ವ್ಯವಸ್ಥಾಪಕ ಪ್ರಶಾಂತ್, ಶ್ಯಾಮಣ್ಣ, ದಯಾನಂದ ಅತ್ತಾಳ, ಲೋಕೇಶ್, ಗಣೇಶ್ ಗೌಡ ನೈತ್ತಾಡಿ ಸೇರಿದಂತೆ ಹಲವು ಮಂದಿ ಭಕ್ತಾದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here