ಬೆಳ್ಳಿಪ್ಪಾಡಿ ಕೊಡಿಮರ ಅಂಗನವಾಡಿ ಕೇಂದ್ರದಲ್ಲಿ ಬಾಲಮೇಳ, ಸ್ತ್ರೀಶಕ್ತಿ ಸಂಘದ ವಾರ್ಷಿಕೋತ್ಸವ, ಸನ್ಮಾನ

0

ಪುತ್ತೂರು: ಬೆಳ್ಳಿಪ್ಪಾಡಿ ಗ್ರಾಮದ ಕೊಡಿಮರ ಅಂಗನವಾಡಿ ಕೇಂದ್ರದಲ್ಲಿ ಬಾಲಮೇಳ, ಸ್ತ್ರೀಶಕ್ತಿ ಸಂಘದ ವಾರ್ಷಿಕೋತ್ಸವ ಹಾಗೂ ಸನ್ಮಾನ ಕಾರ್ಯಕ್ರಮ ನಡೆಯಿತು.


ಅಂಗನವಾಡಿ ಪುಟಾಣಿಗಳಾದ ಜ್ಞಾನ್ ಮತ್ತು ಜಸ್ವಿತ್ ಕಾರ್ಯಕ್ರಮ ಉದ್ಘಾಟಿಸಿದರು. ಬಾಲವಿಕಾಸ ಸಮಿತಿ ಅಧ್ಯಕ್ಷೆ ಪವಿತ್ರ ದಯಾನಂದ ಬಾರ್‍ತಿಯೋಲ್ ಅಧ್ಯಕ್ಷತೆ ವಹಿಸಿದ್ದರು. ಕೋಡಿಂಬಾಡಿ ಗ್ರಾ.ಪಂ. ಅಧ್ಯಕ್ಷ ಕೆ. ರಾಮಚಂದ್ರ ಪೂಜಾರಿ, ಸದಸ್ಯರಾದ ಪುಷ್ಪಾ ಲೋಕಯ್ಯ ಕೊಡಿಮರ, ರಾಮಣ್ಣ ಗೌಡ ಗುಂಡೋಲೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕರಾದ ಜಲಜಾಕ್ಷಿ, ನಾಗಲತಾ, ತಾ.ಪಂ.ಮಾಜಿ ಸದಸ್ಯೆ ನೇತ್ರಾವತಿ ಕೆ.ಪಿ. ಗೌಡ, ಕೋಡಿಂಬಾಡಿ ಸ್ತ್ರೀಶಕ್ತಿ ಗೊಂಚಲಿನ ಅಧ್ಯಕ್ಷೆ ಪವಿತ್ರಾ ಶೇಖರ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ರೋಹಿತಾಶ್ವ, ಸಂಜೀವಿನಿ ಒಕ್ಕೂಟದ ಮುಖ್ಯ ಬರಹಗಾರರಾದ ಸಂಧ್ಯಾ ಕೆ., ಸ್ತ್ರೀಶಕ್ತಿ ಸಂಘದ ಅಧ್ಯಕ್ಷೆ ಲಲಿತಾ ತಿಮ್ಮಪ್ಪ ಗೌಡ ಕೈಲಾಜೆ, ಲಲಿತಾ ಆನಂದ ಆಚಾರಿ ಕೊಡಪೊಟ್ಯ ಮತ್ತು ಹರಿಣಾಕ್ಷಿ ಅಡ್ಕರೆಗುರಿ ಉಪಸ್ಥಿತರಿದ್ದರು.
ನಿವೃತ್ತ ಕಿರಿಯ ಆರೋಗ್ಯ ಸಹಾಯಕಿ ಸಾರಮ್ಮ ಪಿ.ಕೆ.ರವರನ್ನು ಸನ್ಮಾನಿಸಿ ಗೌರವಿಸಲಾಯಿತು. ಅಂಗನವಾಡಿ ಪುಟಾಣಿಗಳಿಗೆ, ಸ್ತ್ರೀಶಕ್ತಿ ಸದಸ್ಯರಿಗೆ ಮತ್ತು ಪೋಷಕರಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿ ಬಹುಮಾನ ವಿತರಿಸಲಾಯಿತು. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೇವಾ ಪ್ರತಿನಿಧಿ ಮಮತಾ, ಆಶಾ ಕಾರ್ಯಕರ್ತೆ ಮೋಹಿನಿ, ವಿಕಲಚೇತನರ ಪುರ್ನಸತಿ ಕಾರ್ಯಕರ್ತೆ ಲೀಲಾವತಿ, ಶಾಂತಿನಗರ ಪ್ರೌಢಶಾಲಾ ಶಿಕ್ಷಕಿ ನಯನ ಬೊಳಂದೂರು, ಬಾಲವಿಕಾಸ ಸಮಿತಿ ಮಾಜಿ ಅಧ್ಯಕ್ಷ ಪುರಂದರ ಗೌಡ ನೇಲಡ್ಕ, ಸುಮಿತ್ರ ಅಂದ್ರಿಗೇರಿ, ಅಂಗನವಾಡಿ ಕಾರ್ಯಕರ್ತೆಯರಾದ ಗೌರಿ ಎಸ್., ಮಲ್ಲಿಕಾ ಎಸ್.ಆಳ್ವ ಮತ್ತಿತರರು ಭಾಗವಹಿಸಿದ್ದರು.


ಕಾರ್ಯಕ್ರಮದ ಪ್ರಾಯೋಜಕರಾಗಿ ನಿವೃತ್ತ ಸೈನಿಕ ಚಂದ್ರಶೇಖರ ಗುಂಡೋಲೆ, ದಯಾನಂದ ಬಾರ್‍ತಿಯೋಲ್, ಗಣೇಶ ಬಾರ್‍ತಿಯೋಲ್, ಕೇಶವ ಬಾರ್‍ತಿಯೋಲ್, ವಿಶ್ವನಾಥ ಬಾರ್‍ತಿಯೋಲ್, ದಯಾನಂದ ಕೊಡಿಮರ, ಲೋಕೇಶ ಕೊಡಿಮರ, ದಯಾನಂದ ಕಲ್ಲಾಜೆ, ಮನೋಹರ ಗೌಡ ಡಿ.ವಿ., ಪ್ರೇಮಚಂದ್ರ ನೇಲಡ್ಕ, ದಾಮೋದರ ಗೌಡ ಬೊಳಂದೂರು, ಜಗನ್ನಾಥ ಅಂದ್ರಿಗೇರಿ, ಉಮೇಶ ಅಂದ್ರಿಗೇರಿ, ತಿಮ್ಮಪ್ಪ ಅಂದ್ರಿಗೇರಿ ಸಹಕರಿಸಿದರು. ಗ್ರಾಮ ಪಂಚಾಯತ್ ಸದಸ್ಯ ರಾಮಣ್ಣ ಗೌಡ ಗುಂಡೋಲೆ ಸ್ವಾಗತಿಸಿ ಅಂಗನವಾಡಿ ಕಾರ್ಯಕರ್ತೆ ರೇವತಿ ಎ. ವಂದಿಸಿದರು. ಬೀರಿಗ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಅರುಣಾ ಡಿ. ಮತ್ತು ಸಪ್ನಾ ಶೆಟ್ಟಿ ಕಠಾರ ಕಾರ್ಯಕ್ರಮ ನಿರೂಪಿಸಿದರು. ಭವಾನಿ, ಜಯಶ್ರೀ, ನಿರ್ಮಲ, ದಯಾನಂದ ಕಲ್ಲಾಜೆ ಮತ್ತು ಅಂಗನವಾಡಿ ಸಹಾಯಕಿ ದಿವ್ಯಾ ಸಹಕರಿಸಿದರು.

LEAVE A REPLY

Please enter your comment!
Please enter your name here