ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ಕ್ಷೇತ್ರದ ಬ್ರಹ್ಮಕಲಶೋತ್ಸವದ ಹಿನ್ನೆಲೆ ಗುರುಪುರ ಮಳಳಿ ಮಟ್ಟಿ ಶ್ರೀ ಮಂಜುನಾಥೇಶ್ವರ ದೇವಸ್ಥಾನ ಜೋಗಿ ಮಠದಲ್ಲಿ ವಲಯ ಸಮಿತಿ ರಚನೆ

0

ವಿಟ್ಲ: ಮಾಣಿಲ ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ಕ್ಷೇತ್ರದಲ್ಲಿ 2023ರ ಮಾರ್ಚ್ ತಿಂಗಳಲ್ಲಿ ನಡೆಯಲಿರುವ ಬ್ರಹ್ಮಕಲಶೋತ್ಸವದ ಹಿನ್ನೆಲೆಯಲ್ಲಿ ಕ್ಷೇತ್ರದ ಧರ್ಮದರ್ಶಿ ಶ್ರೀ ಶ್ರೀಕೃಷ್ಣ ಗುರೂಜಿಯವರ ಮಾರ್ಗದರ್ಶನದಲ್ಲಿ ಶ್ರೀ ಉಮೇಶ್ ನಾಥ ಕದ್ರಿ ಸ್ವಾಮೀಜಿಯವರ ಅಧ್ಯಕ್ಷತೆಯಲ್ಲಿ ವಲಯ ಸಮಿತಿಯ ರಚನೆಯ ಸಭೆ ನಡೆಸಲಾಯಿತು.

ಈ ಸಂಧರ್ಭದಲ್ಲಿ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವದ ಯಶಸ್ವಿಗೆ ಈ ವಲಯದ ಜನರು ಸಹಕರಿಸಬೇಕೆಂದು ಕುಕ್ಕಾಜೆ ಕ್ಷೇತ್ರದ ಧರ್ಮದರ್ಶಿ ಶ್ರೀ ಶ್ರೀಕೃಷ್ಣ ಗುರೂಜಿಯವರು ವಿನಂತಿಸಿದರು. ಜೀರ್ಣೋದ್ಧಾರ ಸಮಿತಿಯ ಕಾರ್ಯದರ್ಶಿ ಶ್ರೀಧರ್ ಬಾಳೆಕಲ್ಲುರವರು ಕ್ಷೇತ್ರದ ಬಗೆಗಿನ ಮಾಹಿತಿ ನೀಡಿದರು.

ಈ ಸಂಧರ್ಭದಲ್ಲಿ ಕ್ಷೇತ್ರ ದ ಪದಾಧಿಕಾರಿಗಳಾದ ಕೆ ಗಂಗಾಧರ ಜೋಗಿ, ವಸಂತ ಪೂಜಾರಿ, ಗೌತಮ್, ಶಿವ , ಹರಿಶ್ಚಂದ್ರ, ಅಶೋಕ, ಸಚಿನ್ ಸಾಲ್ಯಾನ್, ಕೃಷ್ಣ, ಹರೀಶ್ ಮಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ವಲಯ ಸಮಿತಿಯನ್ನು ರಚಿಸಲಾಯಿತು.

ಗೌರವ ಅಧ್ಯಕ್ಷರಾಗಿ ಶ್ರೀ ಉಮೇಶ್ ನಾಥ ಕದ್ರಿ ಸ್ವಾಮೀಜಿ, ಅಧ್ಯಕ್ಷರಾಗಿ ಕೆ. ಗಂಗಾಧರ ಜೋಗಿ ಮಟ್ಟಿ, ಉಪಾಧ್ಯಕ್ಷರಾಗಿ ಶಿವರಾಮ ಮಟ್ಟಿ, ಕಾರ್ಯದರ್ಶಿಯಾಗಿ ಹರೀಶ್ ಮಟ್ಟಿ, ಜತೆ ಕಾರ್ಯದರ್ಶಿಯಾಗಿ ಹರಿಶ್ಚಂದ್ರ, ವಿಶ್ವನಾಥ, ಅಶೋಕ್ ,ಕಾರ್ಯಕಾರಿ ಸದಸ್ಯರಾಗಿ ವಸಂತ ಪೂಜಾರಿ, ಕೃಷ್ಣ ಪೂಜಾರಿ, ಗೌತಮ್ ಪೂಜಾರಿ ಸಹಿತ 25 ಮಂದಿ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು.

ಈ ಸಂಧರ್ಭದಲ್ಲಿ ಕುಕ್ಕಾಜೆ ಕ್ಷೇತ್ರದ ರವಿ ಎಸ್ಎಂ ,ಯೋಗಿಶ್ ಬೊಂಡಾಳ ,ಗಣೇಶ ಬೊಂಡಾಳ ಸತ್ಯ ಪ್ರಸಾದ್ ಕುಕ್ಕಾಜೆ ಉಪಸ್ಥಿತರಿದ್ದರು, ಹರೀಶ್ ಮಟ್ಟಿ ಸ್ವಾಗತಿಸಿ, ಶ್ರೀಧರ್ ಪಿಕೆ ಕುಕ್ಕಾಜೆ ವಂದಿಸಿದರು.

LEAVE A REPLY

Please enter your comment!
Please enter your name here