ಇರ್ದೆ ಬೆಟ್ಟಂಪಾಡಿ ಶೌರ್ಯ ವಿಪತ್ತು ನಿರ್ವಹಣಾ ತಂಡದಿಂದ ಸ್ವಚ್ಚತಾ ಅಭಿಯಾನ

0

ನಿಡ್ಪಳ್ಳಿ; ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ ಟ್ರಸ್ಟ್ ಇದರ ವತಿಯಿಂದ ಆರಂಭಗೊಂಡ ಇರ್ದೆ ಬೆಟ್ಟಂಪಾಡಿ ಶೌರ್ಯ ವಿಪತ್ತು ನಿರ್ವಹಣಾ ತಂಡದ ಸದಸ್ಯರು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ 75 ನೇ ಜನ್ಮ ದಿನೋತ್ಸವದ ಅಂಗವಾಗಿ ನ.25 ರಂದು ಸ್ವಚ್ಚತಾ ಅಭಿಯಾನ ನಡೆಸಿದರು.

ಬೆಳಿಗ್ಗೆ ಬೆಟ್ಟಂಪಾಡಿ ಗ್ರಾಮ ಪಂಚಾಯತ್ ಬಳಿಯಿಂದ ಆರಂಭಗೊಂಡ ಸ್ವಚ್ಚತಾ ಕಾರ್ಯಕ್ರಮ ಮುಖ್ಯ ರಸ್ತೆಯ ಎರಡೂ ಬದಿ ಇದ್ದ ಪ್ಲಾಸ್ಟಿಕ್, ಬಾಟ್ಲಿ ಇನ್ನೀತರ ತ್ಯಾಜ್ಯವನ್ನು ಹೆಕ್ಕುವ ಮೂಲಕ ಮಧ್ಯಾಹ್ನದವರೆಗೆ ಇರ್ದೆ, ಚೆಲ್ಯಡ್ಕ, ಗುಮ್ಮಟೆಗದ್ದೆ, ಅಜ್ಜಿಕಲ್ಲು ಮೂಲಕ ಕಾಪಿಕಾಡ್ ಬಸ್ಸು ನಿಲ್ದಾಣದವರೆಗೆ ಸ್ವಚ್ಚತೆಯನ್ನು ಮಾಡಲಾಯಿತು.ಸುಮಾರು 20 ಗೋಣಿ ಪ್ಲಾಸ್ಟಿಕ್, ಬಾಟ್ಲಿ ಮತ್ತು ಒಣ ಕಸವನ್ನು ಸಂಗ್ರಹಿಸಿ ಪಂಚಾಯತ್ ಗೆ ನೀಡಿದರು. ಇವರ ಈ ಕಾರ್ಯಕ್ರಮಕ್ಕೆ ಸಾರ್ವಜನಿಕವಾಗಿ ಪ್ರಶಂಸೆ ವ್ಯಕ್ತವಾಯಿತು.

 

LEAVE A REPLY

Please enter your comment!
Please enter your name here