ಸರ್ವೆ ಶ್ರೀ ಷಣ್ಮುಖ ಯುವಕ ಮಂಡಲದ ವತಿಯಿಂದ ಸರ್ವೆ ಪ್ರಾಥಮಿಕ ಆರೋಗ್ಯ ಕೇಂದ್ರದ ವಠಾರದಲ್ಲಿ ಎರಡು ದಿನಗಳ ಸ್ವಚ್ಛತಾ ಶ್ರಮದಾನ

0

ಪುತ್ತೂರು: ರಾಜ್ಯ ಪ್ರಶಸ್ತಿ ಪುರಸ್ಕೃತ ಸರ್ವೆ ಶ್ರೀ ಷಣ್ಮುಖ ಯುವಕ ಮಂಡಲದ ವತಿಯಿಂದ ಸರ್ವೆ ಪ್ರಾಥಮಿಕ ಆರೋಗ್ಯ ಕೇಂದ್ರದ ವಠಾರದಲ್ಲಿ ಎರಡು ದಿನಗಳ ಸ್ವಚ್ಛತಾ ಶ್ರಮದಾನ ನಡೆಯಿತು.


ಯುವಕ ಮಂಡಲದ ಅಧ್ಯಕ್ಷ ಗೌತಮ್‌ರಾಜ್ ಕರುಂಬಾರು, ಪ್ರ.ಕಾರ್ಯದರ್ಶಿ ಮನೋಜ್ ಸುವರ್ಣ ಸೊರಕೆ, ಕೋಶಾಧಿಕಾರಿ ಗುರುರಾಜ್ ಪಟ್ಟೆಮಜಲು, ಪದಾಧಿಕಾರಿಗಳಾದ ಗೌತಮ್ ಪಟ್ಟೆಮಜಲು, ಅಶೋಕ್ ಎಸ್.ಡಿ, ವಸಂತ್ ಕೈಪಂಗಳದೋಳ, ಕೀರ್ತನ್ ಎಸ್.ಡಿ, ಜಯರಾಜ್ ಸುವರ್ಣ ಸೊರಕೆ, ಸುಬ್ರಹ್ಮಣ್ಯ ಕರುಂಬಾರು, ಶರೀಫ್ ಎಸ್.ಎಂ, ರಾಜೇಶ್ ಎಸ್.ಡಿ, ಜಯಂತ ಸರ್ವೆದೋಳಗುತ್ತು, ಸಂತೋಷ್ ಪರಂಟೊಲು, ನಾಗೇಶ್ ಪಟ್ಟೆಮಜಲು, ಪ್ರಮೋದ್ ಆಲೇಕಿ, ತಿಲಕ್‌ರಾಜ್ ಕರುಂಬಾರು, ಉಮೇಶ್ ಸರ್ವೆದೋಳಗುತ್ತು, ಚಿರಾಗ್ ರೈ ಮೇಗಿನಗುತ್ತು, ಕ್ಷಿತಿಜ್ ಸೊರಕೆ, ಮುಂಡೂರು ಗ್ರಾ.ಪಂ ಸದಸ್ಯರಾದ ಕಮಲೇಶ್ ಸರ್ವೆದೋಳಗುತ್ತು ಪಾಲ್ಗೊಂಡರು. ಯುವಕ ಮಂಡಲದ ಗೌರವ ಸಲಹೆಗಾರರಾದ ಡಾ.ಸೀತಾರಾಮ್ ಭಟ್ ಕಲ್ಲಮ ಹಾಗೂ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ನಮಿತಾ ನಾಯ್ಕ್ ಉಪಹಾರದ ವ್ಯವಸ್ಥೆ ಮಾಡಿದ್ದರು. ಆಸ್ಪತ್ರೆ ಸಿಬ್ಬಂದಿಗಳು ಸಹಕರಿಸಿದರು.

LEAVE A REPLY

Please enter your comment!
Please enter your name here