ರಾಮಕುಂಜೇಶ್ವರ ಪ.ಪೂ.ಕಾಲೇಜಿನ ಉಪನ್ಯಾಸಕ ಹರಿನಾರಾಯಣ ಆಚಾರ್ಯ ಸ್ವಯಂ ನಿವೃತ್ತಿ

0

ರಾಮಕುಂಜ: ಶ್ರೀ ರಾಮಕುಂಜೇಶ್ವರ ಪದವಿಪೂರ್ವ ಕಾಲೇಜಿನ ಆಂಗ್ಲ ಭಾಷಾ ಉಪನ್ಯಾಸಕ ಎಂ.ಹರಿನಾರಾಯಣ ಆಚಾರ್ಯರವರು ಡಿ.31ರಂದು ಸ್ವಯಂ ನಿವೃತ್ತಿ ಹೊಂದಿದ್ದಾರೆ.

1987 ರಲ್ಲಿ ವೃತ್ತಿ ಆರಂಭಿಸಿದ ಹರಿನಾರಾಯಣ ಆಚಾರ್ಯರವರು 35ವರ್ಷಗಳ ಸುದೀರ್ಘ ಸೇವೆ ಪೂರೈಸಿದ್ದಾರೆ. ಇಂಗ್ಲಿಷ್ ಸಾಹಿತ್ಯದಲ್ಲಿ ಅಪಾರ ಜ್ಞಾನ ಹೊಂದಿದ್ದ ಇವರು ಸಂಪನ್ಮೂಲ ವ್ಯಕ್ತಿಯಾಗಿ ಉಪನ್ಯಾಸಕರುಗಳಿಗೆ ತರಬೇತಿಯನ್ನು ನೀಡಿರುತ್ತಾರೆ. ವೃಂದಾವನಸ್ಥರಾದ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರ ಪೂರ್ವಾಶ್ರಮದ ನಿಕಟ ಬಂಧುವಾದ ಇವರು ಶ್ರೀಗಳವರು ಜನಿಸಿದ ಮನೆಯಲ್ಲೇ ವಾಸವಿದ್ದು ಕ್ಷೇತ್ರದ ಆರಾಧ್ಯ ದೇವರಾದ ಎರೆಟಾಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನವನ್ನು ಅಭಿವೃದ್ಧಿಪಡಿಸುವಲ್ಲಿ ಪ್ರಧಾನ ಪಾತ್ರವನ್ನು ವಹಿಸಿ, ಪ್ರಸ್ತುತ ಅದರ ನಿರ್ವಹಣೆಯನ್ನು ಮಾಡುತ್ತಿದ್ದಾರೆ.

LEAVE A REPLY

Please enter your comment!
Please enter your name here