ಜ್ಯೋತಿಷಿ ಲೋಕೇಶ್ ಬಲ್ಯಾಯರವರಿಂದ ಕುಂಜೂರು ದುರ್ಗಾಪರಮೇಶ್ವರಿ ದೇವಸ್ಥಾನ ಟೇಬಲ್ ಕೊಡುಗೆ

0

ಪುತ್ತೂರು:ಪಾಣಾಜೆಯ ಸ್ವಸ್ತಿಕ ಜ್ಯೋತಿಷ್ಯಾಲಯದ ಜ್ಯೋತಿಷ್ಯರಾದ ಆರ್ಯಾಪು ದೊಡ್ಡಡ್ಕ ನಿವಾಸಿ ಲೋಕೇಶ್ ಬಲ್ಯಾಯ ಮತ್ತು ಕಾವ್ಯಶ್ರೀ ದಂಪತಿಯವರು ಕುಂಜೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಆವಶ್ಯಕವಾದ ರೂ.35,೦೦೦ ಮೌಲ್ಯದ ಊಟದ ಟೇಬಲ್‌ಗಳನ್ನು ಕೊಡುಗೆ ನೀಡಿದರು.


ಡಿ.30ರಂದು ದೇವಸ್ಥಾನಕ್ಕೆ ಆಗಮಿಸಿ ಆಗಮಿಸಿ ವ್ಯವಸ್ಥಾಪನಾ ಅಧ್ಯಕ್ಷ ಪ್ರದೀಪಕೃಷ್ಣ ಬಂಗಾರಡ್ಕರವರಿಗೆ ಹಸ್ತಾಂತರಿಸಿದರು. ಅರ್ಚಕ ಸದಾನಂದ ರವಿ, ಸದಸ್ಯರಾದ ವಿಶ್ವನಾಥ ಕುಲಾಲ್, ನವೀನ್ ಕುಮಾರ್, ಚಂದಪ್ಪ ಪೂಜಾರಿ, ಮಹಾಲಿಂಗ ನಾಯ್ಕ ಮಚ್ಚಿಮಲೆ, ಶುಭಕರ ರಾವ್, ಲೀಲಾವತಿ, ಉಮಾವತಿ, ಬಲ್ನಾಡು ಗ್ರಾ.ಪಂ ಅಧ್ಯಕ್ಷ ಇಂದಿರಾ ಎಸ್.ರೈ, ಪ್ರಶಾಂತ್ ಬಲ್ಯಾಯ, ಕವಿತ, ತಿಮ್ಮಪ್ಪ ಸುವರ್ಣ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here