ನೀರುಕುಕ್ಕು ಸೇಸಪ್ಪ ನಾಯ್ಕರವರಿಗೆ ಪಿಎಂಜೆಜೆಬಿವೈ ವಿಮೆ 2 ಲಕ್ಷ ರೂ. ಚೆಕ್ ಹಸ್ತಾಂತರ

0

ಪುತ್ತೂರು: ಪ್ರಧಾನಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆಯ ಫಲಾನುಭವಿ ಕುಟುಂಬಕ್ಕೆ ಬ್ಯಾಂಕ್ ಆಫ್ ಬರೋಡಾ ಬೆಟ್ಟಂಪಾಡಿ ಶಾಖೆಯಿಂದ 2 ಲಕ್ಷ ರೂ. ಚೆಕ್ ನೀಡಲಾಯಿತು.


ಯೋಜನೆಯ ಫಲಾನುಭವಿ ನಿಡ್ಪಳ್ಳಿ ಗ್ರಾಮದ ನೀರುಕುಕ್ಕು ಸೇಸಪ್ಪ ನಾಯ್ಕರವರ ಪತ್ನಿ ಸುಜಾತ ನಾಯ್ಕರವರು ನಿಧನರಾದ ಹಿನ್ನಲೆಯಲ್ಲಿ ಅವರ ಪತಿ ಶೇಷಪ್ಪ ನಾಯ್ಕರವರಿಗೆ 2 ಲಕ್ಷ ರೂ.ನ ಚೆಕ್‌ನ್ನು ಬ್ಯಾಂಕ್ ಆಫ್ ಬರೋಡಾ ಬೆಟ್ಟಂಪಾಡಿ ಶಾಖಾ ಪ್ರಬಂಧಕ ಸತೀಶ್ ಕುಮಾರ್ ಬಿ.ರವರು ಹಸ್ತಾಂತರಿಸಿದರು. ವಿಮಾ ಯೋಜನೆಯನ್ನು ನೋಂದಾವಣೆ ಮಾಡಿದ್ದ ಬ್ಯಾಂಕ್ ವ್ಯವಹಾರ ಪ್ರತಿನಿಧಿ ಪ್ರಭಾಕರ ರೈ ಬಾಜುವಳ್ಳಿ ಉಪಸ್ಥಿತರಿದ್ದರು.

ಪ್ರಧಾನಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆಯು ಸರಕಾರದ ಸೌಲಭ್ಯವಾಗಿದೆ. 18  ವರ್ಷದಿಂದ 50 ವರ್ಷದೊಳಗಿನವರು ವರ್ಷಕ್ಕೆ ರೂ.436 ಪಾವತಿಸಬೇಕು. ಯೋಜನೆಯ ಫಲಾನುಭವಿ ಯಾವುದೇ ರೀತಿಯಲ್ಲಿ ಮರಣ ಹೊಂದಿದರೂ ರೂ.2ಲಕ್ಷ ವಿಮೆ ದೊರೆಯುತ್ತದೆ. ಗ್ರಾಹಕರು ಇದರ ಪ್ರಯೋಜನ ಪಡೆಯಬಹುದು

ಸತೀಶ್ ಕುಮಾರ್ ಬಿ.
ಶಾಖಾ ಪ್ರಬಂಧಕ

LEAVE A REPLY

Please enter your comment!
Please enter your name here