ಪುತ್ತೂರು: ಸುಳ್ಯ ತಾಲೂಕು ಬಳ್ಳ ನಿವಾಸಿ, ಸುಳದಿ ಶ್ರೀಮಹಾವಿಷ್ಣು ದೇವಸ್ಥಾನದ ಪ್ರಧಾನ ಅರ್ಚಕ ಮತ್ತು ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪುರುಷೋತ್ತಮ ಅಮ್ಮಣ್ಣಾಯ(67ವ.) ಅಸೌಖ್ಯದಿಂದ ಜ.3ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಇವರು ಬಳ್ಪ ಪ್ರಾ.ಪಂ. ಸದಸ್ಯರಾಗಿ ಸೇವೆ ಸಲ್ಲಿಸಿದ್ದರಲ್ಲದೆ ಯಕ್ಷಗಾನ ಅರ್ಥಧಾರಿಯಾಗಿದ್ದರು.
ಮೃತರು ಪತ್ನಿ ವಸಂತಿ, ಪುತ್ರ ಬೆಂಗಳೂರಿನಲ್ಲಿ ಇಂಜಿನಿಯರ್ ಆಗಿರುವ ಅಭಿಷೇಕ್ ಅಮ್ಮಣ್ಣಾಯ, ಸಹೋದರರಾದ ಟಿ.ವಿ.ಎಸ್. ಕಂಪನಿಯ ನಿವೃತ್ತ ಉದ್ಯೋಗಿ ಸುಬ್ರಾಯ ಅಮ್ಮಣ್ಣಾಯ ಪುತ್ತೂರು, ಕರ್ನಾಟಕ ಬ್ಯಾಂಕಿನ ನಿವೃತ್ತ ಉದ್ಯೋಗಿ ಗೋಪಾಲ ಅಮ್ಮಣ್ಣಾಯ ಬಳ್ಳ, ಸಹೋದರಿಯರಾದ ರತ್ನಾ, ಪದ್ಮಾಕ್ಷಿ ಬಳ್ಳ, ಪ್ರೇಮ ಕಾಪು, ಸೊಸೆ ಬೆಂಗಳೂರಿನ ಆರ್.ವಿ. ಕಾಲೇಜಿನಲ್ಲಿ ಉಪನ್ಯಾಸಕಿಯಾಗಿರುವ ದಿವ್ಯಾ ರವರನ್ನು ಅಗಲಿದ್ದಾರೆ.