ಬರೆಪ್ಪಾಡಿ- ಕಾರ್ಲಾಡಿ ರಸ್ತೆ ಅಭಿವೃದ್ಧಿಗೆ ಸಚಿವ ಅಂಗಾರರಿಂದ ಶಿಲಾನ್ಯಾಸ

0

ಕಾಣಿಯೂರು: ಬರೆಪ್ಪಾಡಿ-ಕಾರ್ಲಾಡಿ ರಸ್ತೆ ಅಭಿವೃದ್ಧಿಗೆ ರೂ. 35ಲಕ್ಷ ಅನುದಾನದಲ್ಲಿ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್. ಅಂಗಾರ ಗುದ್ದಲಿಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಸುಳ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಕೇಶ್ ರೈ ಕೆಡೆಂಜಿ, ಬೆಳಂದೂರು ಗ್ರಾ. ಪಂ. ಅಧ್ಯಕ್ಷ ಲೋಹಿತಾಕ್ಷ ಕೆಡೆಂಜಿಕಟ್ಟ, ಸವಣೂರು ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಗಣೇಶ್ ಉದನಡ್ಕ, ಗ್ರಾ.ಪಂ.ಸದಸ್ಯರಾದ ತಾರಾ ಅನ್ಯಾಡಿ, ಗೀತಾ ಕುವೆತ್ತೋಡಿ, ಪ್ರವೀಣ್ ಕೆರೆನಾರು, ಸವಣೂರು ಗ್ರಾ. ಪಂ. ಸದಸ್ಯ ಗಿರೀಶಂಕರ್ ಸುಲಾಯ, ಜಿಲ್ಲಾ ಯುವಜನ ಒಕ್ಕೂಟದ ಅಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು, ತಾ.ಪಂ. ಮಾಜಿ ಸದಸ್ಯೆ ಲಲಿತಾ ಈಶ್ವರ, ಕುದ್ಮಾರು ಬಿಜೆಪಿ ಬೂತ್ ಸಮಿತಿ ಅಧ್ಯಕ್ಷರಾದ ಅಶೋಕ್ ಕೇಡೆಂಜಿ, ಸತೀಶ್ ಹೊಸೋಕ್ಲು, ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರಾದ ತನಿಯಪ್ಪ ನಾಯ್ಕ್, ನಿರ್ಮಲ ಕೇಶವ ಗೌಡ ಅಮೈ,ಇಂದಿರಾ ಬಿಕೆ, ಸೀತಾರಾಮ ಕಾರ್ಲಾಡಿ, ಯೋಗೀಶ್ ಕಾರ್ಲಾಡಿ, ದೇವರಾಜ್ ಕಾರ್ಲಾಡಿ, ಗೋಪಾಲಕೃಷ್ಣ ಕಾರ್ಲಾಡಿ, ಹರೀಶ್ ಕಾರ್ಲಾಡಿ, ಚಂದ್ರ ಕಾರ್ಲಾಡಿ ಮತ್ತಿತರರು ಉಪಸ್ಥಿತರಿದ್ದರು. ಲೋಕೇಶ್ ಬಿ. ಎನ್ ಸ್ವಾಗತಿಸಿ, ವಂದಿಸಿದರು.

LEAVE A REPLY

Please enter your comment!
Please enter your name here