ಅಡ್ಡಹೊಳೆಯಲ್ಲಿ 5 ವರ್ಷದ ಹಿಂದೆ ನಡೆದ ಅಪಘಾತ : ಆರೋಪಿ ಕಾರು ಚಾಲಕ ದೋಷಮುಕ್ತ

0

ಪುತ್ತೂರು: ಶಿರಾಡಿ ಗ್ರಾಮದ ಅಡ್ಡಹೊಳೆಯಲ್ಲಿ 2017ರ ಜ.1ರಂದು ನಡೆದ ಬೈಕ್ ಮತ್ತು ಕಾರು ನಡುವಿನ ಅಪಘಾತ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಕಾರು ಚಾಲಕನನ್ನು ಪುತ್ತೂರು ನ್ಯಾಯಾಲಯ ದೋಷಮುಕ್ತಗೊಳಿಸಿ ತೀರ್ಪು ನೀಡಿದೆ.
2017ರ ಜ.1ರಂದು ಶಿರಾಡಿ ಗ್ರಾಮದ ಅಡ್ಡಹೊಳೆಯಲ್ಲಿ ಬೈಕ್ ಮತ್ತು ಕಾರು ನಡುವೆ ಡಿಕ್ಕಿ ಸಂಭವಿಸಿತ್ತು.ಅಪಘಾತದಿಂದಾಗಿ ಬೈಕ್ ಸವಾರ ಗುರುಪ್ರಸಾದ್, ಸಹಸವಾರರಾದ ನತೀಶ್ ಎನ್ ಮತ್ತು ನಜೀತ್ ಅವರು ಗಾಯಗೊಂಡಿದ್ದರು.ಘಟನೆ ಕುರಿತು ಆರೋಪಿ ಕಾರು ಚಾಲಕ ಬೆಂಗಳೂರಿನ ಚಿನ್ನಪ್ಪನಹಳ್ಳಿ ನಿವಾಸಿ ಸುನಿಲ್ ಅವರ ವಿರುದ್ಧ ಪ್ರಕರಣ ದಾಖಲಾಗಿತ್ತು.ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿ ಸುನಿಲ್ ಅವರನ್ನು ದೋಷಮುಕ್ತಗೊಳಿಸಿ ತೀರ್ಪು ನೀಡಿದೆ. ಆರೋಪಿ ಪರ ವಕೀಲರಾದ ಮಾಧವ ಪೂಜಾರಿ ಮತ್ತು ಮೋಹಿನಿ ವಾದಿಸಿದ್ದರು.

LEAVE A REPLY

Please enter your comment!
Please enter your name here