ಪುತ್ತೂರಿನ ಮಹಾವೀರ ಮೆಡಿಕಲ್ ಸೆಂಟರ್ನಲ್ಲಿ ಡಾ.ಅರ್ಚನಾ ಕೆ.ನಾಯಕ್ ಅವರ ENT ಕ್ಲಿನಿಕನ್ನು ಮೆಡಿಕಲ್ ಸೆಂಟರ್ ನ ಮ್ಯಾನೇಂಜಿಂಗ್ ಡೈರೆಕ್ಟರ್ ಡಾ. ಅಶೋಕ್ ಪಡಿವಾಳ್ ದೀಪ ಬೆಳಗಿಸಿ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು ENT ಕ್ಲಿನಿಕ್ ನಿಂದ ಜನರು ಉಪಯೋಗ ಪಡೆಯಲಿ ಮತ್ತು ಸಂಸ್ಥೆಯ ಉತ್ತಮ ಸೌಲಭ್ಯಗಳು ಜನರಿಗೆ ಸಿಗುವಂತಾಗಲಿ ಎಂದು ಹಾರೈಸಿದರು. ಡಾ. ಸುರೇಶ್ ಪುತ್ತೂರಾಯ, ಈ ಕ್ಲಿನಿಕ್ ನಿಂದ ವೈದ್ಯರಿಗೂ ಸಂಸ್ಥೆಗೂ ಕೀರ್ತಿಬರಲಿ, ಪುತ್ತೂರಿನ ಜನತೆಗೂ ಉತ್ತಮ ಸೇವೆ ಸಿಗುವಂತಾಗಲಿ ಎಂದು ಹಾರೈಸಿದರು.
ಪ್ರತಿಷ್ಠಿತ ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ಕಿವಿ, ಮೂಗು, ಗಂಟಲು ವಿಭಾಗದಲ್ಲಿ ಎಂ ಎಸ್ ಪದವಿಯನ್ನು ಪಡೆದಿರುವ ಡಾ. ಅರ್ಚನಾ ಮೂಲತಃ ಸುಳ್ಯದವರಾಗಿದ್ದು ನಾರಣಕಜೆ ಮತ್ತು ಎಲಿಮಲೆ ಸರಕಾರಿ ಶಾಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಪಡೆದು ಅರಂತೋಡು-ನೆಹರು ಮೆಮೋರಿಯಲ್ ಕಾಲೇಜಿನಲ್ಲಿ PU ಮುಗಿಸಿ ಆ ಬಳಿಕ ಹಾಸನದ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸಯನ್ಸ್ ನಲ್ಲಿ ಎಂ ಬಿ ಬಿ ಎಸ್ ಪದವಿ ಪಡೆದು, ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ಎಂ ಎಸ್ ಪದವಿಯನ್ನು ಪಡೆದಿರುತ್ತಾರೆ. ಕಡ್ಡಾಯ ಗ್ರಾಮೀಣ ಸೇವೆಯನ್ವಯ ಬೆಳ್ಳಾರೆಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 30ತಿಂಗಳು ಸೇವೆಸಲ್ಲಿಸಿದ್ದು, ಜ.6ರಿಂದ ಪುತ್ತೂರಿನಲ್ಲಿ ತಮ್ಮ ಸ್ವಂತ ಕ್ಲಿನಿಕ್ ತೆರೆಯುವ ಮೂಲಕ ವೈದ್ಯಕೀಯ ಸೇವೆಗೆ ಅಡಿಯಿಟ್ಟಿದ್ದಾರೆ.
ಕಾರ್ಯಕ್ರಮದಲ್ಲಿ ಸಂಸ್ಥೆಯ ವೈದ್ಯರುಗಳಾದ ಡಾ. ಪ್ರದೀಪ್ ಬೋರ್ಕರ್, ಡಾ. ಸಾಯಿಪ್ರಕಾಶ್ ಮತ್ತು ಸೆಂಟರಿನ ಸಿಬ್ಬಂದಿವರ್ಗದವರು ಹಾಗೂ ನ್ಯಾಯವಾದಿಗಳಾದ ಸತೀಶ್ ವಾಗ್ಲೆ, ಡಾ. ಅರ್ಚನಾರ ಹೆತ್ತವರಾದ ಇಂದಿರಾ ಮತ್ತು ದಿವಾಕರ ನಾಯಕ್ ಕೋಟಿಗದ್ದೆ (ಎರ್ಮೆಟ್ಟಿ) ಹಾಗೂ ಅತ್ತೆ ಮಾವಂದಿರಾದ ವೇದಾವತಿ ಮತ್ತು ಬಾಲಕೃಷ್ಣ ನಾಯಕ್ ಆಜೇರು (ತೆಂಕಿಲ) ಉಪಸ್ಥಿತರಿದ್ದರು. ಡಾ. ಅರ್ಚನಾ ಪತಿ ಅಭಿಷೇಕ್ ಸ್ವಾಗತಿಸಿ, ಬಾಲಕೃಷ್ಣ ನಾಯಕ್ ವಂದಿಸಿದರು.
ಜನತೆ ಪುತ್ತೂರಿನ ಮಹಾವೀರ ಮೆಡಿಕಲ್ ಸೆಂಟರಿನಲ್ಲಿರುವ ಈ ಕ್ಲಿನಿಕ್ ನ ಉಪಯೋಗ ಪಡೆಯಲು ಕೋರಲಾಗಿದೆ.
ಟೋಕನ್ ಪಡೆಯಲು ಮಹಾವೀರ ಮೆಡಿಕಲ್ ಸೆಂಟರಿನ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದ್ದು ಬೆಳಗ್ಗೆ 10 ರಿಂದ 01 ಗಂಟೆವರೆಗೆ ಮತ್ತು ಅಪರಾಹ್ನ 3 ರಿಂದ 6ಗಂಟೆವರೆಗೆ ವೈದ್ಯರು ಸೇವೆಗೆ ಲಭ್ಯರಿರುತ್ತಾರೆ.