ಪುತ್ತೂರು: ಆರ್ಯಾಪು ಗ್ರಾಮ ಪಂಚಾಯತ್ ವ್ಯಾಪ್ತಿಯ ವಿಕಲಚೇತನರ ವಿಶೇಷ ಗ್ರಾಮಸಭೆ ಆರ್ಯಾಪು ಗ್ರಾಮ ಪಂಚಾಯತ್ ಅಧ್ಯಕ್ಷೆ ಸರಸ್ವತಿರವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ.ಸಭಾಂಗಣದಲ್ಲಿ ನಡೆಯಿತು.
ಪುತ್ತೂರು ತಾ.ಪಂ. ವಿಕಲಚೇತನರ ವಿವಿಧೋದ್ಧೇಶ ಪುನರ್ವಸತಿ ಕಾರ್ಯಕರ್ತರಾದ ನವೀನ್ಕುಮಾರ್ವರು ವಿಕಲಚೇತನರ ಇಲಾಖೆಯಿಂದ ವಿಕಲಚೇತನರಿಗೆ ದೊರೆಯುವ ಸವಲತ್ತು, ವಿಶಿಷ್ಟ ಗುರುತಿನ ಚೀಟಿ ಯು.ಡಿ.ಐಡಿ ಕಾರ್ಡ್ನ ಬಗ್ಗೆ ಮಾಹಿತಿ ನೀಡಿದರು. ಆರ್ಯಾಪು ಗ್ರಾ.ಪಂ. ಗ್ರಾಮೀಣ ಪುನರ್ವಸತಿ ಕಾರ್ಯಕರ್ತ ಲಕ್ಷ್ಮೀಕಾಂತ್ ಹೆಗಡೆ ವಿಕಲಚೇತನರ ಇಲಾಖೆಯ ಆಧಾರ್ ಯೋಜನೆಯ ಮಾಹಿತಿ ನೀಡಿದರು. ಕೆನರಾ ಬ್ಯಾಂಕಿನ ಆರ್ಥಿಕ ಸಾಕ್ಷರತಾ ಸಂಯೋಜಕಿ ಗೀತಾ ವಿಜಯ್ ವಿಕಲಚೇತನರಿಗೆ ಬ್ಯಾಂಕಿನಿಂದ ದೊರೆಯುವ ಸೌಲಭ್ಯಗಳ ಮಾಹಿತಿ ನೀಡಿದರು.
ವೇದಿಕೆಯಲ್ಲಿ ಆರ್ಯಾಪು ಗ್ರಾ.ಪಂ. ಉಪಾಧ್ಯಕ್ಷೆ ಪೂರ್ಣಿಮಾ ರೈ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅವಿನಾಶ್ ಬಿ.ಆರ್., ಕಾರ್ಯದರ್ಶಿ ಮೋನಪ್ಪ ಕೆ., ಉಪಸ್ಥಿತರಿದ್ದರು. ಆರ್ಯಾಪು ಗ್ರಾ.ಪಂ. ಸದಸ್ಯರು, ವಿಕಲಚೇತನರು, ವಿಕಲಚೇತನರ ಪೋಷಕರು ಭಾಗವಹಿಸಿದರು.