ಪುತ್ತೂರು: ಕಾಣಿಯೂರು ಸವಣೂರು ರೈತ ಉತ್ಪಾದಕ ಕಂಪನಿ, ಕುದ್ಮಾರು ವತಿಯಿಂದ ಬೆಂಗಳೂರಿಗೆ ಅಧ್ಯಯನ ಪ್ರವಾಸ ಹಮ್ಮಿಕೊಂಡಿದ್ದು, ಜ.10 ರಂದು ಒಟ್ಟು 40 ಮಂದಿ ಸಂಸ್ಥೆಯ ರೈತರು ಸೇರಿ ಆನೇಕಲ್ ರೈತ ಉತ್ಪಾದಕ ಸಂಸ್ಥೆ ಬೆಂಗಳೂರಿಗೆ ಭೇಟಿ ನೀಡಿ ಆ ಸಂಸ್ಥೆಯ ಕಾರ್ಯ ಚಟುವಟಿಕೆಯ ಬಗ್ಗೆ ಮತ್ತು ಬೆಳವಣಿಗೆಯ ಬಗ್ಗೆ ಸಂಸ್ಥೆಯ ಲೆಕ್ಕಪರಿಶೋಧಕಿ ಶಾಮಲಾ ರವರಿಂದ ತರಬೇತಿಯನ್ನು ಪಡೆದರು. ಭಾ. ಕೃ. ಅ. ಪ – ಭಾರತೀಯ ತೋಟಗಾರಿಕಾ ಸಂಶೋಧನ ಸಂಸ್ಥೆ ಬೆಂಗಳೂರು ಸಂಸ್ಥೆಗೆ ರೈತರ ತಂಡ ಭೇಟಿ ನೀಡಿ ತರಕಾರಿ ಬೆಳೆ, ಹಣ್ಣು ಹಂಪಲು, ಹಲವಾರು ಕೃಷಿಯನ್ನು ಬೆಳೆಸುವ ಬಗ್ಗೆ ಸಂಶೋಧನ ವಿಜ್ಞಾನಿರವರಿಂದ ತರಬೇತಿಯನ್ನು ಪಡೆಯಲಾಯಿತು.
ಈ ಸಂದರ್ಭದಲ್ಲಿ ಕಾಣಿಯೂರು ಸವಣೂರು ರೈತ ಉತ್ಪಾದಕ ಸಂಸ್ಥೆಯ ಅಧ್ಯಕ್ಷ ಗಿರಿಶಂಕರ ಸುಲಾಯ ಮತ್ತು ನಿರ್ದೇಶಕರಾದ ಧನಂಜಯ ಕೇಣಾಜೆ, ಶ್ರೀಧರ ಸುಣ್ಣಾಜೆ, ಸುಬ್ರಾಯ ಗೌಡ ಪಾಲ್ತಾಡಿ, ನಿರ್ಮಲ ಕೇಶವ ಗೌಡ ಅಮೈ, ಶಿವರಾಮ ಗೌಡ, ಸದಾನಂದ ಸೌತೆಮಾರು ಹಾಗೂ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಿಕೇಶ್ ಗೌಡ ಎಡಮಂಗಳ, ಡಾಟಾ ಆಪರೇಟರ್ ಅಶೋಕ್ ಬಾರೆಂಗಳ ಮತ್ತು ಐಸಿಸಿಓಎ ಸಂಸ್ಥೆಯ ಯೋಜನಾಧಿಕಾರಿ ಸತೀಶ್ ನಾಯ್ಕ್ ಮತ್ತು ಸ್ಥಳೀಯ ಸಂಪನ್ಮೂಲ ವ್ಯಕ್ತಿ ಧರ್ಮೇಂದ್ರ ಗೌಡ ಕಟ್ಟತ್ತಾರು ಹಾಗೂ ರಾಜೇಶ್ ರೈ ಮುಗೇರು ಮತ್ತು ಸಂಸ್ಥೆಯ ರೈತರು ಉಪಸ್ಥಿತರಿದ್ದರು.