ಮೊಟ್ಟೆತ್ತಡ್ಕ ಮಜಲು ಕ್ಷೇತ್ರದಲ್ಲಿ ದೈವಗಳಿಗೆ ಸಂಕ್ರಮಣ ಕೋಲ

0

ಪುತ್ತೂರು: ಕಲಿಯುಗ ಕಲೆ,ಕಾರಣಿಕ ಇತಿಹಾಸ ಪ್ರಸಿದ್ಧ ಕ್ಷೇತ್ರವಾಗಿರುವ ಕೆಮ್ಮಿಂಜೆ ಗ್ರಾಮದ ಮೊಟ್ಟೆತ್ತಡ್ಕ ಮಜಲು ಸ್ವಾಮಿ ಕೊರಗಜ್ಜ, ಅಗ್ನಿ ಕಲ್ಲುರ್ಟಿ ದೈವಸ್ಥಾನದಲ್ಲಿ ಮಕರ ಸಂಕ್ರಮಣದಂಗವಾಗಿ ಜ.15ರಂದು ಮಧ್ಯಾಹ್ನ 12 ಗಂಟೆಗೆ ಅಗೇಲು ಸೇವೆ ನಡೆಯಿತು.ಅದೇ ದಿನ ರಾತ್ರಿ ದೈವಗಳಿಗೆ ಸಂಕ್ರಮಣ ಕೋಲ,ಅಗೇಲು ಸೇವೆ ನಡೆಯಿತು.


ರಾತ್ರಿ ಆರಂಭದಲ್ಲಿ ಕೆಂಡದರ್ಶನ ಸೇವೆ ನಡೆದು ನಂತರ ಅಗ್ನಿ ಕಲ್ಲುರ್ಟಿ ಕೋಲ ನಡೆಯಿತು.ಬಳಿಕ ಸ್ವಾಮಿ ಕೊರಗಜ್ಜ ದೈವದ ಕೋಲ ನಡೆಯಿತು.ಕೋಲದ ಸಂದರ್ಭ ಸಾರ್ವಜನಿಕ ಅನ್ನಸಂತರ್ಪಣೆ ನೆರವೇರಿತು.ನಾಡಿನ ವಿವಿಧ ಕಡೆಗಳಿಂದ ಹಲವಾರು ಭಕ್ತಾದಿಗಳು ಆಗಮಿಸಿದ್ದರು.


ಕ್ಷೇತ್ರದಲ್ಲಿ ಪ್ರತಿ ತಿಂಗಳ ಸಂಕ್ರಮಣದಂದು ರಾತ್ರಿ ಸ್ವಾಮಿ ಕೊರಗಜ್ಜ,ಅಗ್ನಿ ಕಲ್ಲುರ್ಟಿ ದೈವಗಳ ಕೋಲ,ಅಗೇಲು ಸೇವೆ ನಡೆಯುತ್ತದೆ.ಸಂಕ್ರಮಣದ ಹೊರತು ಪ್ರತಿ ಆದಿತ್ಯವಾರ ಮಧ್ಯಾಹ್ನ ಸ್ವಾಮಿ ಕೊರಗಜ್ಜ ದೈವದ ಹಗಲು ಕೋಲ, ಅಗೇಲು ಸೇವೆ ನಡೆಯುತ್ತದೆ.ಸೋಮವಾರ, ಮಂಗಳವಾರ, ಶುಕ್ರವಾರ ಮತ್ತು ಶನಿವಾರ ಪ್ರಶ್ನಾ ಚಿಂತನೆ ಹಾಗೂ ಬುಧವಾರ, ಗುರುವಾರ ಸೂಚಿತ ಪರಿಹಾರ ಕಾರ್ಯಗಳು ನಡೆಯುತ್ತದೆ ಎಂದು ಕ್ಷೇತ್ರದ ಧರ್ಮದರ್ಶಿ ಮಣಿಸ್ವಾಮಿ ತಿಳಿಸಿದ್ದಾರೆ.ಅಗೇಲು ಸೇವೆ, ಕೋಲ ಸೇವೆ ಮಾಡಿಸುವವರು ಮುಂಚಿತವಾಗಿ ಕ್ಷೇತ್ರದಲ್ಲಿ(ಮೊ:9740463437

)ಹೆಸರು ನೋಂದಾಯಿಸಿಕೊಳ್ಳುವಂತೆ ಧರ್ಮದರ್ಶಿ ವಿನಂತಿಸಿದ್ದಾರೆ.

LEAVE A REPLY

Please enter your comment!
Please enter your name here