ಕೆಮ್ಮಾಯಿ ವಾರ್ಷಿಕೋತ್ಸವ- ಕ್ರೀಡಾಕೂಟದಲ್ಲಿ ಸಾಧನೆಗೈದವರಿಗೆ ಸನ್ಮಾನ

0

ಪುತ್ತೂರು: ಕೆಮ್ಮಾಯಿ ಶ್ರೀ ವಿಷ್ಣು ಯುವಕ ಮಂಡಲದ 26 ನೇ ವರ್ಷದ ವಾರ್ಷಿಕೋತ್ಸವ ಮತ್ತು ಓಂ ಅಶ್ವತ್ಥಪುರದಲ್ಲಿ ಶನೈಶ್ಚರ ಗ್ರಹವೃತ ಕಲ್ಪೋಕ್ತ ಪೂಜೆಯಲ್ಲಿ ಸಂಜೆ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮ ಕ್ರೀಡಾಕೂಟದಲ್ಲಿ ಸಾಧನೆ ಮಾಡಿದವರನ್ನು ಗೌರವಿಸಲಾಯಿತು.


ವಿದ್ಯಾಭಾರತಿಯಿಂದ ನಡೆದ ಕ್ರೀಡಾಕೂಟದಲ್ಲಿ ಸಾಧನೆ ಮಾಡಿದ ಕೃಪಾಲ್, ಸಚಿನ್, ದೀಕ್ಷಿತ್ ಅವರನ್ನು ಗೌರವಿಸಲಾಯಿತು. ವಿಷ್ಣುಯುವಕ ಮಂಲಡದ ಸದಸ್ಯರಾಗಿದ್ದು ನಿಧನರಾಗಿರುವ ಉದಯ ಕುಮಾರ್, ಸುರೇಶ್ ಮಡಿವಾಳ, ಸುದೀಂದ್ರ ಬೇಕಲ್, ಜಿನ್ನಪ್ಪ ಗೌಡ, ಪ್ರಭಾಕರ ಪ್ರಭು ಅವರ ದಿವ್ಯಾತ್ಮಕ್ಕೆ ಚಿರಶಾಂತಿ ಕೋರಿ ಇದೇ ಸಂದರ್ಭದಲ್ಲಿ ಮೌನ ಪ್ರಾರ್ಥನೆ ಮಾಡಲಾಯಿತು.

 

LEAVE A REPLY

Please enter your comment!
Please enter your name here