ಭೈರವೈಕ್ಯ ಶ್ರೀ ಡಾ| ಬಾಲಗಂಗಾಧರನಾಥ ಸ್ವಾಮೀಜಿಯವರ ಜಯಂತ್ಯೋತ್ಸವ ಸಂಸ್ಮರಣ ಹಿನ್ನಲೆ – ರಾಜ್ಯಸಭಾ ಸದಸ್ಯ ಚಿತ್ರ ನಟ ಜಗ್ಗೇಶ್ ಭಾಗವಹಿಸುವ ಸಾಧ್ಯತೆ !

0

ಪುತ್ತೂರು: ಜ.22 ರಂದು ಪುತ್ತೂರಿನಲ್ಲಿ ನಡೆಯಲಿರುವ ಭೈರವೈಕ್ಯ ಶ್ರೀ ಡಾ| ಬಾಲಗಂಗಾಧರನಾಥ ಸ್ವಾಮೀಜಿಯವರ 78 ನೇ ಜಯಂತ್ಯೋತ್ಸವ, ಶ್ರೀ ಆದಿ ಚುಂಚನಾಗಿರಿ ಮಠದ ಪೀಠಾಧ್ಯಕ್ಷರಾಗಿ 10 ವರ್ಷ ಪೂರೈಸಿದ ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರ ದಶಮಾನೋತ್ಸವ, ಮಂಗಳೂರು ಶಾಖಾ ಮಠದ ಡಾ.ಶ್ರೀ ಧರ್ಮಪಾಲನಾಥ ಸ್ವಾಮೀಜಿ ಅವರು ರಚಿಸಿದ ಡಾ.ಬಾಲಗಂಗಾಧರನಾಥ ಶ್ರೀ ಗಳ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮಕ್ಕೆ ರಾಜ್ಯಸಭಾ ಸದಸ್ಯ ಚಲನಚಿತ್ರ ನಟ ಜಗ್ಗೇಶ್ ಅವರು ಬರಲಿದ್ದಾರೆ.


ಜ.20ರಂದು ಪುತ್ತೂರು ಶಾಸಕರ ಪರವಾಗಿ ಜಯಂತ್ಯೋತ್ಸವ ಸಮಿತಿಯ ವಸಂತ ವೀರಮಂಗಲ ಅವರು ಜಗ್ಗೇಶ್ ಅವರಿಗೆ ಆಮಂತ್ರಣ ನೀಡಿದ್ದಾರೆ. ಜಯಂತ್ಯೋತ್ಸವ ಕಾರ್ಯಕ್ರಮಕ್ಕೆ ಖಂಡಿತಾ ಬರುವುದಾಗಿ ತಿಳಿಸಿದ ಅವರು ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೂ ತೆರಳಲಿದ್ದಾರೆ.

LEAVE A REPLY

Please enter your comment!
Please enter your name here