ಉಪ್ಪಿನಂಗಡಿ ವರದಿಗಾರ ಸಿದ್ದೀಕ್ ನೀರಾಜೆಯವರಿಗೆ ಸುದ್ದಿಯಿಂದ ಬಿಡುಗಡೆ-ವರದಿಗಾರರ ಹೊಸ ತಂಡ ನೇಮಕ

0

ಪುತ್ತೂರು:35  ವರ್ಷಗಳಿಂದ ಯಶಸ್ವಿಯಾಗಿ ಮುನ್ನಡೆಯುತ್ತಿರುವ, ಜಗತ್ತಿನೆಲ್ಲೆಡೆ ಅಸಂಖ್ಯಾತ ಓದುಗರನ್ನು ಹೊಂದಿರುವ ಪುತ್ತೂರಿನ ನಂಬರ್ ವನ್ ದಿನಪತ್ರಿಕೆ `ಸುದ್ದಿ ಬಿಡುಗಡೆ’ಯಲ್ಲಿ ಕಳೆದ ಹಲವು ವರ್ಷಗಳಿಂದ ಗೌರವ ವರದಿಗಾರರಾಗಿ ಉಪ್ಪಿನಂಗಡಿ ಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಿದ್ದೀಕ್ ನೀರಾಜೆಯವರನ್ನು ಸುದ್ದಿ ಬಿಡುಗಡೆಯಿಂದ ಬಿಡುಗಡೆಗೊಳಿಸಲಾಗಿದೆ.

ಬಲಾತ್ಕಾರದ ಬಂದ್, ಸಾಮಾಜಿಕ ಜಾಲತಾಣಗಳ ದುರುಪಯೋಗ, ಲಂಚ-ಭ್ರಷ್ಟಾಚಾರದ ವಿರುದ್ಧದ ಆಂದೋಲನ ಸೇರಿದಂತೆ ಸುದ್ದಿಯ ಜನೋಪಯೋಗಿ ಆಂದೋಲನಗಳ ವಿರೋಧಿಗಳಿಗೆ ಸಿದ್ದೀಕ್ ನೀರಾಜೆಯವರು ಪ್ರೋತ್ಸಾಹಿಸುತ್ತಿರುವುದು ಮತ್ತು ಸುದ್ದಿ ವಿರೋಧಿಯಾಗಿ ಕೆಲಸ ನಿರ್ವಹಿಸುತ್ತಿರುವುದು ಇತ್ತೀಚೆಗೆ ನಮ್ಮ ತಿಳುವಳಿಕೆಗೆ ಬಂದಿರುವುದರಿಂದ ಅವರನ್ನು ಸುದ್ದಿಯಿಂದ ಬಿಡುಗಡೆಗೊಳಿಸಲಾಗಿದೆ.

ಅವರ ಮುಂದಿನ ವೃತ್ತಿ ಜೀವನಕ್ಕೆ ಶುಭಹಾರೈಸುತ್ತಾ,ಸಾರ್ವಜನಿಕರು ಸುದ್ದಿ ಬಿಡುಗಡೆಗೆ ಸಂಬಂಧಿಸಿ ವರದಿ,ಜಾಹೀರಾತು, ಇತರ ಯಾವುದೇ ವಿಷಯಗಳಿಗೆ ಸಿದ್ದೀಕ್ ನೀರಾಜೆಯವರ ಬದಲು ಉಪ್ಪಿನಂಗಡಿಯಲ್ಲಿರುವ ಸುದ್ದಿಯ ಹೊಸ ತಂಡವನ್ನು ಸಂಪರ್ಕಿಸುವಂತೆ ಕೋರಲಾಗಿದೆ.

ಉಪ್ಪಿನಂಗಡಿಗೆ ಸುದ್ದಿಯಿಂದ ವರದಿಗಾರರ ಹೊಸ ತಂಡ

ಉಪ್ಪಿನಂಗಡಿ ಭಾಗಕ್ಕೆ ಸುದ್ದಿ ಬಿಡುಗಡೆಯಿಂದ ವರದಿಗಾರರ ಹೊಸ ತಂಡವನ್ನು ರಚನೆ ಮಾಡಲಾಗಿದೆ.ದೀಪಕ್‌ರವರು ಉಪ್ಪಿನಂಗಡಿಯ ಮುಖ್ಯ ವರದಿಗಾರರಾಗಿದ್ದು ಜೊತೆಗೆ ಪುತ್ತೂರಿನಿಂದ ಹಿರಿಯ ವರದಿಗಾರ ಶೇಖ್ ಜೈನುದ್ದೀನ್ ಮತ್ತು ವರದಿಗಾರ ಸಿದ್ದೀಕ್ ಕುಂಬ್ರ ಅವರನ್ನು ಪ್ರತ್ಯೇಕ ದಿನಗಳಲ್ಲಿ ಉಪ್ಪಿನಂಗಡಿಯಲ್ಲಿ ಕರ್ತವ್ಯ ನಿರ್ವಹಿಸಲು ನಿಯೋಜಿಸಲಾಗಿದೆ.ಲೋಕಯ್ಯ ಸಂಪ್ಯಾಡಿ ಅವರು ಉಪ್ಪಿನಂಗಡಿ ಸುದ್ದಿ ಕಚೇರಿ ವ್ಯವಸ್ಥಾಪಕರಾಗಿರುತ್ತಾರೆ.

ಸುದ್ದಿಗೆ ಸಂಬಂಧಿಸಿ ವರದಿ,ಜಾಹೀರಾತು, ಮಾಹಿತಿಗಾಗಿ ಇವರನ್ನು ಸಂಪರ್ಕಿಸುವಂತೆ ಕೋರಲಾಗಿದೆ.

LEAVE A REPLY

Please enter your comment!
Please enter your name here