





ಕಾಣಿಯೂರು: ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲ ಪುತ್ತೂರಿನಲ್ಲಿ ನಡೆದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ , ಶಾಂತಿವನ ಟ್ರಸ್ಟ್ (ರಿ ) ಹಾಗೂ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖಾ ವತಿಯಿಂದ ನಡೆದ ‘ಜ್ಞಾನ ರಥ’ ಮತ್ತು ‘ಜ್ಞಾನ ಪಥ’ ಪುಸ್ತಕಗಳ ತಾಲೂಕು ಮಟ್ಟದ ಸ್ಪರ್ಧೆಯಲ್ಲಿ ಪ್ರಗತಿ ವಿದ್ಯಾಸಂಸ್ಥೆಯ ಪ್ರಾಥಮಿಕ ವಿಭಾಗದ ಶ್ಲೋಕ ಕಂಠಪಾಠ ಸ್ಪರ್ಧೆಯಲ್ಲಿ ಧನುಷ್ ಕೆ (7ನೇ) ಪ್ರಥಮ. ಇವರು ಕಡಬ ತಾಲೂಕು ಚಾರ್ವಾಕ ಗ್ರಾಮದ ಕಾಸ್ಪಾಡಿ ಸತ್ಯನಾರಾಯಣ ಕಲ್ಲುರಾಯ ಮತ್ತು ಕಲ್ಪನ ದಂಪತಿಗಳ ಸುಪುತ್ರ, ಪ್ರಬಂಧ ಸ್ಪರ್ಧೆಯಲ್ಲಿ ವನ್ಶಿ ಕೆ ಎಂ (7ನೇ) ದ್ವಿತೀಯ. ಇವರು ಕಡಬ ತಾಲೂಕಿನ ಬೆಳಂದೂರು ಗ್ರಾಮದ ಅಬೀರ ಮನೋಹರ ಕೆ ಮತ್ತು ಚೇತನಾ ಕೆ ದಂಪತಿಗಳ ಸುಪುತ್ರಿ. ಪ್ರೌಢ ಶಾಲಾ ವಿಭಾಗದ ಪ್ರಬಂಧ ಸ್ಪರ್ಧೆಯಲ್ಲಿ ಸುಹಾನಿ ರೈ ಎಸ್ (10ನೇ) ದ್ವಿತೀಯ. ಇವರು ಸುಳ್ಯ ತಾಲೂಕಿನ ಅಮರಪಡ್ನೂರು ಗ್ರಾಮದ ಶೇಣಿ ಹರಿಪ್ರಸಾದ್ ರೈ ಮತ್ತು ಸುಮನ ದಂಪತಿಗಳ ಸುಪುತ್ರಿ. ಈ ಮೂವರು ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಇವರಿಗೆ ಸಂಸ್ಥೆಯ ಶಿಕ್ಷಕಿ ಜಯಶೀಲ ಕೆ ಮಾರ್ಗದರ್ಶನ ನೀಡಿರುತ್ತಾರೆ.












