ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ತಿನ ಜಿಲ್ಲಾ ಮಟ್ಟದ ಸಭೆ

0

ಪುತ್ತೂರು : ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ತಿನ ಜಿಲ್ಲಾ ಮಟ್ಟದ ಸಭೆ ಉಪ್ಪಿನಂಗಡಿ ಮಹತೋಭಾರ ಶ್ರೀ ಸಹಸ್ರಲಿಂಗೇಶ್ವರ-ಮಹಾಕಾಳಿ ದೇವಸ್ಥಾನದ ಸಭಾಂಗಣದಲ್ಲಿ ನ. 11ರಂದು ನಡೆಯಿತು.


ಹಿರಿಯ ಧಾರ್ಮಿಕ ಮುಖಂಡ ಧನ್ಯ ಕುಮಾರ್ ರೈ ಬಿಳಿಯಯೂರು ಗುತ್ತು, ದೀಪಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ರಾಜ್ಯ ಭಜನಾ ಪರಿಷತ್ ಸಂಚಾಲಕ ಜಿ ಸುಬ್ರಹ್ಮಣ್ಯ ಪ್ರಸಾದ್ ಮಾತನಾಡಿ, ಭಜನಾ ಪರಿಷತ್ ಬಹಳಷ್ಟು ಕಾರ್ಯಕ್ರಮ ಹಮ್ಮಿಕೊಳ್ಳುತ್ತಿರುವುದು ಉತ್ತಮ ಬೆಳವಣಿಗೆ,ಭಜನಾ ಕಮ್ಮಟಕ್ಕೆ ಇನ್ನೂ ಹೆಚ್ಚಿನ ಸಹಕಾರ ನೀಡಿ ಎಂದರು.


ಭಜನಾ ಪರಿಷತ್ ರಾಜ್ಯಾಧ್ಯಕ್ಷ ಚಂದ್ರಶೇಖರ್ ಸಾಲ್ಯಾನ್ ಸಭೆಯ ಅಧ್ಯಕ್ಷತೆ ವಹಿಸಿ, ವಲಯ ಮಟ್ಟದಿಂದಲೇ ಭಜನಾ ಪರಿಷತ್ತನ್ನು ಸಂಘಟಿಸಿ ಕಾರ್ಯಕ್ರಮ ಆಗುವಂತೆ ನೋಡಿಕೊಳ್ಳುವುದು ಉತ್ತಮ ಎಂದು ತಿಳಿಸಿದರು.


ದಕ್ಷಿಣ ಕನ್ನಡ 2 ಇದರ ಜಿಲ್ಲಾ ನಿರ್ದೇಶಕ ಬಾಬು ನಾಯ್ಕರವರು ಮಾತನಾಡಿ, ಅಲ್ಲಲ್ಲಿ ಭಜನೋತ್ಸವದ ಮುಖಾಂತರ ಭಜಕರನ್ನ ಸಂಘಟಿಸುತ್ತಿರುವುದು ಭಜನಾ ಪರಿಷತ್ತಿನ ಕಾರ್ಯ ಚಟುವಟಿಕೆಗಳ ಶ್ಲಾಘನೀಯ ಕೆಲಸ ಎಂದರು.


ಉಡುಪಿ ಶ್ರೀ ಕೃಷ್ಣ ಮಠದ ಪ್ರಧಾನರಾದ ವಿಕ್ರಂ ಕುಂಟಾರು, ನವೆಂಬರ್ ತಿಂಗಳ 28 ಹಾಗೂ 30 ರಂದು ನಡೆಯಲಿರುವ ಗೀತೋತ್ಸವ ಹಾಗೂ ಭಜನೋತ್ಸವದ ಬಗ್ಗೆ ಮಾಹಿತಿ ನೀಡಿದರು.


ಭಜನಾ ಕಮ್ಮಟದ ತರಬೇತುದಾರರು,ದಾಸಸಂಕೀರ್ತನಕಾರರೂ ಆದ ರಾಮಕೃಷ್ಣ ಕಾಟುಕುಕ್ಕೆ ಅವರು ಹಾಗೂ ವಿದುಷಿ ಉಷಾ ಹೆಬ್ಬಾರ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.ಪುತ್ತೂರು ತಾಲೂಕು ಯೋಜನಾಧಿಕಾರಿಗಳಾದ ಶಶಿಧರ್, ಧಾರ್ಮಿಕ ಮುಖಂಡ ಜಯಂತ ಪೋರೋಳಿ ಹಾಗೂ ಕಡಬ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಕಾರ್ಯದರ್ಶಿಗಳಾದ ಸತ್ಯನಾರಾಯಣ ಹೆಗ್ಡೆ ಮತ್ತಿತರ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಬೆಳ್ತಂಗಡಿ ತಾಲೂಕು ಭಜನಾ ಪರಿಷತ್ತಿನ ಅಧ್ಯಕ್ಷರನ್ನಾಗಿ ರವಿ ಚಾರ್ಮಾಡಿ ಹಾಗೂ ಕಡಬ ತಾಲೂಕು ಭಜನಾ ಪರಿಷತ್ತಿನ ಕಾರ್ಯದರ್ಶಿಗಳಾಗಿ ದಿವೀಶ್ ಇವರನ್ನು ಹಾಗೂ ಪ್ರತಿ ತಾಲೂಕು ಭಜನಾ ಪರಿಷತ್ತಿಗೆ ಅಲ್ಲಿನ ಗಣ್ಯರನ್ನು ಗೌರವ ಸಲಹೆಗಾರರನ್ನಾಗಿ ಆಯ್ಕೆ ಮಾಡಲಾಯಿತು.


ಮಂಗಳೂರು,ಮೂಡುಬಿದರೆ,ಬಂಟ್ವಾಳ, ಕಾಸರಗೋಡು, ಮಂಜೇಶ್ವರ, ವಿಟ್ಲ, ಪುತ್ತೂರು, ಕಡಬ, ಸುಳ್ಯ,ಗುರುವಾಯನಕೆರೆ, ಬೆಳ್ತಂಗಡಿ ತಾಲೂಕು ಭಜನಾ ಪರಿಷತ್ತಿನ ಅದ್ಯಕ್ಷರುಗಳು, ಪದಾಧಿಕಾರಿಗಳು,ಗೌರವ ಸಲಹೆಗಾರರು,ಹಾಗೂ ಭಜಕ ಸದಸ್ಯರು,ವಲಯ ಮೇಲ್ವಿಚಾರಕರು ಶ್ರೀ ಶಿವಪ್ಪ ಸೇವಾ ಪ್ರತಿನಿಧಿಗಳು ಉಪಸ್ಥಿತರಿದ್ದರು.


ಪುತ್ತೂರು ತಾಲೂಕು ಭಜನಾ ಪರಿಷತ್ತಿನ ಅಧ್ಯಕ್ಷ ಲೋಕೇಶ್ ಬೆತ್ತೋಡಿಯವರು ಸ್ವಾಗತಿಸಿ, ಧನ್ಯವಾದವಿತ್ತರು. ಭಜನಾ ಪರಿಷತ್ ಜಿಲ್ಲಾ ಸಮನ್ವಯಾಧಿಕಾರಿ ಸಂತೋಷ್ ಪಿ ಅಳಿಯೂರು ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here