ಪುತ್ತೂರು: ವಿವೇಕಾನಂದ ಪದವಿ ಪೂರ್ವ ಕಾಲೇಜ್ ನೆಹರು ನಗರದಲ್ಲಿ, 10ನೇ ವಿದ್ಯಾರ್ಥಿಗಳಿಗೆ ನಡೆಸಿದ ಜಿಲ್ಲಾಮಟ್ಟದ ಕನಸುಗಳು-2025 ರ ಕಾರ್ಯಕ್ರಮದ ರಂಗೋಲಿ ಸ್ಪರ್ಧೆಯಲ್ಲಿ , ನವೋದಯ ಪ್ರೌಢ ಶಾಲೆ ಬೆಟ್ಟಂಪಾಡಿಯ ವಿದ್ಯಾರ್ಥಿನಿಯರಾದ ವಿಭಾಶ್ರೀ ಮತ್ತು ಮಧುಶ್ರೀ ಭಾಗವಹಿಸಿ, ದ್ವಿತೀಯ ಬಹುಮಾನವನ್ನು ಪಡೆದಿರುತ್ತಾರೆ.
ಶಾಲಾ ಶಿಕ್ಷಕಿಯರಾದ ಸುಮಂಗಲಾ.ಕೆ ಮತ್ತು ಭುವನೇಶ್ವರಿ.ಎಂ ಇವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿ ಸಹಕರಿಸಿರುತ್ತಾರೆಂದು ಮುಖ್ಯ ಗುರುಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
