ಹಾಲಿ ಸಮಿತಿಯವರೇ ಮರು ಆಯ್ಕೆ,ಅಧ್ಯಕ್ಷರಾಗಿ ಪಂಜಿಗುಡ್ಡೆ ಈಶ್ವರ ಭಟ್
ಪುತ್ತೂರು: ಹೈಕೋರ್ಟ್ ನಿರ್ದೇಶನದ ಮೇರೆಗೆ ರಾಜ್ಯ ಧಾರ್ಮಿಕ ಪರಿಷತ್ ಮಹತೋಭಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಹೊಸದಾಗಿ ವ್ಯವಸ್ಥಾಪನಾ ಸಮಿತಿ ರಚಿಸಿ ಆದೇಶ ಮಾಡಿದ್ದು ಹಾಲಿ ಸಮಿತಿಯವರೇ ಸದಸ್ಯರಾಗಿ ಮರು ಆಯ್ಕೆಯಾಗಿದ್ದಾರೆ.
ಈಶ್ವರ ಭಟ್ ಪಂಜಿಗುಡ್ಡೆ, ಬಿ.ಈಶ್ವರ ನಾಯ್ಕ ಸಾಮೆತ್ತಡ್ಕ, ಕೃಷ್ಣವೇಣಿ ಮಂಜಲ್ಪಡ್ಪು, ನಳಿನಿ ಪಿ.ಶೆಟ್ಟಿ ‘ಜನನಿ’ಸಾಮೆತ್ತಡ್ಕ, ದಿನೇಶ್ ಕುಲಾಲ್ ಪಿ.ವಿ.‘ಚೈತ್ರ ನಿವಾಸ’ ಮುರ ಕಬಕ,ಮಹಾಬಲ ರೈ ‘ಶಿವಪ್ರಸಾದ್’ ವಳತ್ತಡ್ಕ, ಸುಭಾಶ್ ರೈ ಕಲ್ಲಿಮಾರು ಹಾಗೂ ವಿನಯ ಕುಮಾರ್ ಮುಗೇರಡ್ಕ ನರಿಮೊಗರು ಹಾಗೂ ದೇವಸ್ಥಾನದ ಪ್ರಧಾನ ಅರ್ಚಕ (ವಸಂತ ಕೆದಿಲಾಯ)ರು ಸದಸ್ಯರಾಗಿರುವ ಹಾಲಿ ಸಮಿತಿಯೇ ಮರು ಆಯ್ಕೆಯಾಗಿದೆ. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಈಶ್ವರ ಭಟ್ ಪಂಜಿಗುಡ್ಡೆ ಅವರು ಪುನರಾಯ್ಕೆಯಾಗಿದ್ದಾರೆ.ಸಮಿತಿ ಸದಸ್ಯರು ಸಭೆ ಸೇರಿ ಅಧ್ಯಕ್ಷರ ಆಯ್ಕೆ ಮಾಡಿದರು.
ಹೊಸದಾಗಿ ಸಮಿತಿ ರಚನೆಗೆ ನಿರ್ದೇಶಿಸಿದ್ದ ಹೈಕೋರ್ಟ್:
ಪ್ರಸ್ತುತ ಸಮಿತಿಯವರೇ ಸದಸ್ಯರಾಗಿರುವ ವ್ಯವಸ್ಥಾಪನಾ ಸಮಿತಿಯನ್ನು ವರ್ಷದ ಹಿಂದೆ ರಚಿಸಿ ಆದೇಶ ಹೊರಡಿಸಲಾಗಿತ್ತು.ಈ ಸಮಿತಿ ರಚನೆ ಕ್ರಮಬದ್ಧವಾಗಿ ನಡೆದಿಲ್ಲ ಎಂದು ಆರೋಪಿಸಿ ಬನ್ನೂರು ಗ್ರಾಮದ ಸೇಡಿಯಾಪು ಅನಿಲಕೋಡಿ ದಿ.ಅನಂತೇಶ್ವರ ಭಟ್ ಎಂಬವರ ಮಗಳು ವಸಂತಿ ಯಾನೆ ವಸಂತಲಕ್ಷ್ಮೀ ಎಂಬವರು ಹೈಕೋರ್ಟ್ ನಲ್ಲಿ ರಿಟ್ ಅರ್ಜಿ ಸಲ್ಲಿಸಿ ಸಮಿತಿಯನ್ನು ರದ್ದುಪಡಿಸುವಂತೆ ಕೋರಿದ್ದರು.ರಿಟ್ ಅರ್ಜಿಯನ್ನು ವಿಲೇವಾರಿ ಮಾಡಿರುವ ಹೈಕೋರ್ಟ್, ಸಮಿತಿ ರಚನೆಯಲ್ಲಾಗಿರುವ ತಾಂತ್ರಿಕ ಕಾರಣಗಳ ಆಧಾರದಲ್ಲಿ ವ್ಯವಸ್ಥಾಪನಾ ಸಮಿತಿಯನ್ನು ರದ್ದುಗೊಳಿಸಿ 8 ವಾರದ ಒಳಗಡೆ ರಾಜ್ಯ ಧಾರ್ಮಿಕ ಪರಿಷದ್ ವ್ಯವಸ್ಥಾಪನಾ ಸಮಿತಿ ಪುನರ್ರಚನೆ ಮಾಡಬೇಕು ಎಂದು ನಿರ್ದೇಶನ ನೀಡಿತ್ತು.ದೇವಸ್ಥಾನದಲ್ಲಿ ಪ್ರಸ್ತುತ ಹಲವು ಅಭಿವೃದ್ಧಿ ಕೆಲಸಗಳು ನಡೆಯುತ್ತಿದ್ದು ನೂತನ ವ್ಯವಸ್ಥಾಪನಾ ಸಮಿತಿ ರಚನೆಯಾಗುವ ತನಕ ತಮಗೆ ಮುಂದುವರಿಯಲು ಅವಕಾಶ ನೀಡುವಂತೆ ಪಂಜಿಗುಡ್ಡೆ ಈಶ್ವರ ಭಟ್ ಅಧ್ಯಕ್ಷತೆಯ ಹಾಲಿ ವ್ಯವಸ್ಥಾಪನಾ ಸಮಿತಿಯವರು ಮಾಡಿದ್ದ ಮನವಿಯನ್ನು ನ್ಯಾಯಪೀಠ ಪುರಸ್ಕರಿಸಿ ಅವಕಾಶ ನೀಡಿತ್ತು.ಆ ಬಳಿಕ ಹೊಸದಾಗಿ ಸಮಿತಿ ರಚನೆ ಪ್ರಕ್ರಿಯೆ ನಡೆದು ಇದೀಗ,ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ದತ್ತಿ ಕಾಯ್ದೆ 1997ರ ಸೆಕ್ಷನ್ 25ರ ಅಡಿಯಲ್ಲಿ ತನ್ನ ಅಽಕಾರವನ್ನು ಚಲಾಯಿಸಿ ರಾಜ್ಯ ಧಾರ್ಮಿಕ ಪರಿಷತ್ ವ್ಯವಸ್ಥಾಪನಾ ಸಮಿತಿಯನ್ನು ರಚಿಸಿ ಆದೇಶ ಹೊರಡಿಸಿದೆ.
ಸಭೆಯಲ್ಲಿ ತೀರ್ಮಾನ:
ಸೆ.19ರಂದು ನಡೆದ 4ನೇ ರಾಜ್ಯ ಧಾರ್ಮಿಕ ಪರಿಷತ್ತಿನ 9ನೇ ಸಭೆಯ ವಿಷಯ ಸೂಚಿ ಸಂಖ್ಯೆ(9)ರಲ್ಲಿ ಚರ್ಚಿಸಿ ಉಚ್ಚ ನ್ಯಾಯಾಯದ ರಿಟ್ ಅರ್ಜಿ ಸಂಖ್ಯೆ:35009/2024 (ಜಿಎಮ್-ಆರ್/ಸಿ)ರ ದಿನಾಂಕ 6-8-2025ರ ಅಂತಿಮ ತೀರ್ಪಿನನ್ವಯ ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕು ಪುತ್ತೂರು ಟೌನ್ನಲ್ಲಿರುವ ಶ್ರೀ ಮಹಾಲಿಂಗೇಶ್ವರ ದೇವಾಲಯಕ್ಕೆ 9 ಮಹನೀಯರು/ಮಹಿಳೆಯರನ್ನು ಒಳಗೊಂಡ ವ್ಯವಸ್ಥಾಪನಾ ಸಮಿತಿಯನ್ನು ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ತಿದ್ದುಪಡಿ ಕಾಯ್ದೆ 2011ರ ಸೆಕ್ಷನ್ 25ರ ಅನ್ವಯ ಆದೇಶ ಹೊರಡಿಸಿದ ದಿನಾಂಕದಿಂದ ಮೂರು ವರ್ಷಗಳ ಅವಧಿಗೆ ರಚಿಸಲು ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನಿಸಿ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ನಿಯಮಗಳು 2002, ನಿಯಮ 21(8)ರ ಅಡಿಯಲ್ಲಿ ಪ್ರದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ ವ್ಯವಸ್ಥಾಪನಾ ಸಮಿತಿ ರಚನೆಗೆ ಆದೇಶ ಹೊರಡಿಸಲಾಗಿದೆ.ಈ ಆದೇಶ ಹೊರಡಿಸಿದ ದಿನಾಂಕದಿಂದ ಮುಂದಿನ ಮೂರು ವರ್ಷಗಳ ಅವಽಗೆ ಷರತ್ತಿಗೊಳಪಡಿಸಿ ಸಮಿತಿ ರಚಿಸಿ ಡಿ.5ರಂದು ಆದೇಶ ಹೊರಡಿಸಲಾಗಿದೆ.ಪಂಜಿಗುಡ್ಡೆ ಈಶ್ವರ ಭಟ್, ಬಿ.ಈಶ್ವರ ನಾಯ್ಕ, ಕೃಷ್ಣವೇಣಿ, ನಳಿನಿ ಪಿ.ಶೆಟ್ಟಿ,ದಿನೇಶ್ ಕುಲಾಲ್,ಮಹಾಬಲ ರೈ ವಳತ್ತಡ್ಕ,ಸುಭಾಸ್ ರೈ ಮತ್ತು ವಿನಯ ಕುಮಾರ್ ಬಿ ಹಾಗೂ ದೇವಾಲಯದ ಪ್ರಧಾನ ಅರ್ಚಕರನ್ನು ಸಮಿತಿ ಸದಸ್ಯರನ್ನಾಗಿ ನೇಮಕಗೊಳಿಸಿದ್ದು ಸಮಿತಿ ಸಭೆ ನಡೆಸಿ ಈಶ್ವರ ಭಟ್ ಪಂಜಿಗುಡ್ಡೆಯವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ.
ಹಿಂದಿನ ಆದೇಶ ಕ್ರಮಬದ್ಧವಾಗಿ ನಡೆದಿಲ್ಲವೆಂದು ಹೈಕೋರ್ಟ್ ನಲ್ಲಿ ಸಲ್ಲಿಕೆಯಾಗಿದ್ದ ರಿಟ್ ಅರ್ಜಿ:
ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ದತ್ತಿ ಕಾಯ್ದೆ 1997ರ ಸೆಕ್ಷನ್ 25ರ ಅಡಿಯಲ್ಲಿ ತನ್ನ ಅಽಕಾರವನ್ನು ಚಲಾಯಿಸಿ ರಾಜ್ಯ ಧಾರ್ಮಿಕ ಪರಿಷತ್ ವ್ಯವಸ್ಥಾಪನಾ ಸಮಿತಿಯನ್ನು ರಚಿಸಬೇಕೇ ಹೊರತು ರಾಜ್ಯ ಧಾರ್ಮಿಕ ಪರಿಷತ್ತಿನ ಅಧ್ಯಕ್ಷರಿಗೆ ಪ್ರಾತಿನಿಧಿಕವಾಗಿ ವಹಿಸಿಕೊಟ್ಟು ಅವರು ಸಮಿತಿ ನೇಮಕ ಮಾಡುವ ಅಧಿಕಾರ ಹೊಂದಿರುವುದಿಲ್ಲ.ಆದರೆ ಈ ಪ್ರಕರಣದಲ್ಲಿ ರಾಜ್ಯ ಧಾರ್ಮಿಕ ಪರಿಷತ್ತಿನ ಅಧ್ಯಕ್ಷರು, ಸಮಿತಿಯನ್ನು ರಚಿಸುವ ಆಕ್ಷೇಪಾರ್ಹ ಅಽಸೂಚನೆಯನ್ನು ಹೊರಡಿಸಿದ್ದಾರೆ.ಸಮಿತಿಗೆ ನೇಮಕಾತಿ ಕ್ರಮಬದ್ಧವಾಗಿ ನಡೆಯದೇ ಇರುವುದರಿಂದ ಸಮಿತಿ ಕಾರ್ಯನಿರ್ವಹಿಸದಂತೆ ತಡೆಹಿಡಿಯಬೇಕು ಎಂದು ಅರ್ಜಿದಾರೆ ವಸಂತಿ ಯಾನೆ ವಸಂತಲಕ್ಷ್ಮೀ ಅವರು ಕೋರಿದ್ದರು.ಕರ್ನಾಟಕ ರಾಜ್ಯ ಧಾರ್ಮಿಕ ದತ್ತಿ ಇಲಾಖೆ, ಕರ್ನಾಟಕ ರಾಜ್ಯ ಧಾರ್ಮಿಕ ಪರಿಷದ್, ಧಾರ್ಮಿಕ ದತ್ತಿ ಇಲಾಖಾ ಆಯುಕ್ತರು ಮತ್ತು ರಾಜ್ಯ ಧಾರ್ಮಿಕ ಪರಿಷದ್ನ ಕಾರ್ಯದರ್ಶಿ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಪ್ರಧಾನ ಅರ್ಚಕರು ಮಹಾಲಿಂಗೇಶ್ವರ ದೇವಸ್ಥಾನ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ಸದಸ್ಯರಾದ ಬಿ.ಈಶ್ವರ ನಾಯ್ಕ,ಕೃಷ್ಣವೇಣಿ,ನಳಿನಿ ಪಿ.ಶೆಟ್ಟಿ,ದಿನೇಶ್ ಕುಲಾಲ್,ಮಹಾಬಲ ರೈ ವಳತ್ತಡ್ಕ,ಸುಭಾಸ್ ರೈ ಮತ್ತು ವಿನಯ ಕುಮಾರ್ ಬಿ.ಅವರನ್ನು ಪ್ರತಿವಾದಿಗಳಾಗಿ ರಿಟ್ ಅರ್ಜಿಯಲ್ಲಿ ಕಾಣಿಸಲಾಗಿತ್ತು.ಅರ್ಜಿದಾರರ ಪರ ಹಿರಿಯ ವಕೀಲ ಅಗರ್ತ ಕೇಶವ ಭಟ್ ಅವರು ವಾದಿಸಿದ್ದರು.
ಈ ಪ್ರಕರಣದ ಅರ್ಜಿದಾರರು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ಅರ್ಜಿದಾರರಲ್ಲ ಮತ್ತು 9ನೇ ಪ್ರತಿವಾದಿಯಾಗಿರುವ ಪಂಜಿಗುಡ್ಡೆ ಈಶ್ವರ ಭಟ್ ಅವರೊಂದಿಗಿನ ವೈಯಕ್ತಿಕ ವಿವಾದದಿಂದಾಗಿ ಈ ರಿಟ್ ಅರ್ಜಿ ಸಲ್ಲಿಸಿದ್ದಾರೆ.ದೇವಸ್ಥಾನದ ಅಭಿವೃದ್ಧಿ ಕೆಲಸಗಳಿಗಾಗಿ ಈಗಾಗಲೇ ಅನುದಾನ ಹಂಚಿಕೆಯಾಗಿದ್ದು ನಿರ್ದಿಷ್ಟ ಅವಽಯೊಳಗೆ ಇದರ ಬಳಕೆಯಾಗಬೇಕಾಗಿದೆ,ವ್ಯವಸ್ಥಾಪನಾ ಸಮಿತಿಯನ್ನು ರದ್ದುಗೊಳಿಸಿದ್ದೇ ಆದರೆ ಇದಕ್ಕೆ ಸಮಸ್ಯೆಯಾಗಲಿದೆ ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಅವರ ಪರ ವಕೀಲರಾದ ಜಿ.ಬಾಲಕೃಷ್ಣ ಶಾಸಿಯವರು ನ್ಯಾಯಪೀಠದ ಗಮನ ಸೆಳೆದಿದ್ದರು.ಈ ಸಲ್ಲಿಕೆಗಳು ಮತ್ತು ರಿಟ್ ಅರ್ಜಿದಾರರು ವ್ಯವಸ್ಥಾಪನಾ ಸಮಿತಿ ಸದಸ್ಯತ್ವ ಕೋರಿದ್ದ ಅರ್ಜಿದಾರರಲ್ಲದ ಕಾರಣ, ರಾಜ್ಯ ಧಾರ್ಮಿಕ ಪರಿಷತ್ ವ್ಯವಸ್ಥಾಪನಾ ಸಮಿತಿಯನ್ನು ಪುನರ್ರಚಿಸುವವರೆಗೆ ಪ್ರಸ್ತುತ ವ್ಯವಸ್ಥಾಪನಾ ಸಮಿತಿಯು ಕಾರ್ಯನಿರ್ವಹಿಸುವುದನ್ನು ಮುಂದುವರಿಸಬೇಕು ಎಂದು ಅಭಿಪ್ರಾಯಪಟ್ಟಿರುವ ನ್ಯಾಯಪೀಠ, ರಿಟ್ ಅರ್ಜಿಯನ್ನು ವಿಲೇವಾರಿ ಮಾಡಿತ್ತು.ಈ ಹಿಂದೆ ರಾಜ್ಯ ಧಾರ್ಮಿಕ ಪರಿಷತ್ 16-07-2024ರಂದು ನೀಡಿದ್ದ ಪ್ರಕಟಣೆಯನ್ವಯ ಅರ್ಜಿ ಸಲ್ಲಿಸಿರುವವರು ಮತ್ತು ಸದ್ರಿ ಸಂದರ್ಭದ ಪೊಲೀಸ್ ವರದಿಯನ್ನಷ್ಟೆ ಪರಿಗಣಿಸಿ ರಾಜ್ಯ ಧಾರ್ಮಿಕ ಪರಿಷತ್, ಈ ಆದೇಶದ ಪ್ರಮಾಣೀಕೃತ ಪ್ರತಿಯನ್ನು ಸ್ವೀಕರಿಸಿದ ದಿನಾಂಕದಿಂದ ಎಂಟು ವಾರಗಳ ಒಳಗೆ ವ್ಯವಸ್ಥಾಪನಾ ಸಮಿತಿಯನ್ನು ಪುನರ್ರಚಿಸಬೇಕು ಎಂದು ನ್ಯಾಯಪೀಠ ಷರತ್ತು ಬದ್ಧ ಆದೇಶ ಮಾಡಿತ್ತು.
ಇದೀಗ ಹೊಸದಾಗಿ ವ್ಯವಸ್ಥಾಪನಾ ಸಮಿತಿ ರಚನೆಯಾಗಿದ್ದು ಡಿ.8ರಂದು ಅಧ್ಯಕ್ಷರ ಆಯ್ಕೆಯೂ ನಡೆದಿದೆ.ಮುಂದಿನ ಮೂರು ವರ್ಷಗಳ ಅವಧಿಗೆ ನೂತನ ಸಮಿತಿ ರಚನೆಯಾಗಿದೆ.ಈ ಹಿಂದೆ 2024ರ ಡಿ.18ಕ್ಕೆ ಅಧಿಕಾರ ಸ್ವೀಕರಿಸಿದ್ದ ಸಮಿತಿಯವರೇ ಇದೀಗ ಮತ್ತೆ ಮೂರು ವರ್ಷದ ಅವಽಗೆ ಆಯ್ಕೆಯಾಗಿರುವುದರಿಂದ ಈ ಹಿಂದಿನ 1 ವರ್ಷ ಇವರಿಗೆ ಹೆಚ್ಚುವರಿ ಅವಕಾಶ ಸಿಕ್ಕಂತಾಗಿದೆ.
