ಪುತ್ತೂರು : ಎಸ್ ವೈ ಎಸ್ ಪಾಳ್ಯತ್ತಡ್ಕ ಶಾಖೆ ವತಿಯಿಂದ ಡಿ..8 ರಂದು ಪಾಳ್ಯತ್ತಡ್ಕ ಈಶ್ವರಮಂಗಳ ಸಮಸ್ತ ಕಾರ್ಯಾಲಯ ಇಲ್ಲಿ ಸಮಸ್ತ ವಿಷದೀಕರಣ ತರಗತಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ವೈ ಎಸ್ ಪಾಳ್ಯತಡ್ಕ ಇದರ ಅಧ್ಯಕ್ಷರಾದ ಮಹ್ ಮೂದ್ ಮುಸ್ಲಿಯಾರ್ ವಹಿಸಿದ್ದರು. ಉದ್ಘಾಟನೆಯನ್ನು ಪಾಳ್ಯತಡ್ಕ ಬದ್ರಿಯಾ ಜುಮಾ ಮಸೀದಿ ಖತೀಬರಾದ ಮುರ್ಶಿದ್ ಫೈಝಿ ನಡೆಸಿದರು. ಸಮಸ್ತದ ಬಗ್ಗೆ ವಿಷಧೀಕರಣ ತರಗತಿಯನ್ನು ಅಬ್ದುಲ್ ಖಾದರ್ ಮುನವ್ವರೀ ಉಸ್ತಾದರು ಮಂಡಿಸಿದರು.
ಅಬ್ದುಲ್ ರಹೀಮಾನ್ ಹೈತಮಿ ಸ್ವಾಗತಿಸಿದರು. ವೇದಿಕೆಯಲ್ಲಿ ಪಾಳ್ಯತ್ತಡ್ಕ ಮಸೀದಿ ಕಾರ್ಯದರ್ಶಿ ಇಬ್ರಾಹಿಂ ಹಾಜಿ ಕುಕ್ಕಾಜೆ, SKSSF ಈಶ್ವರಮಂಗಲ ಕ್ಲಸ್ಟರ್ ಖಜಾಂಜಿ ಸಲಾಂ ಪದಡ್ಕ , ಪಾಳ್ಯತ್ತಡ್ಕ ಸದರ್ ಮುಹಲ್ಲಿಂ ಅಬ್ದುಲ್ ರಜಾಕ್ ಮುಸ್ಲಿಯಾರ್ , ಮುಹಮ್ಮದ್ ಮುಸ್ಲಿಯಾರ್ ಮೇನಾಲ, ಇಸ್ಮಾಯಿಲ್ ಹನೀಫಿ ಮರತ್ತೋಡ್, ಹಿರಿಯರಾದ ಮುಹಮ್ಮದ್ ಹಾಜಿ ತೈವಳಪ್ಪು , ಪಿ.ಎ. ಅಬ್ದುಲ್ಲ ಹಾಜಿ, ಪಿ.ಅಬ್ದುಲ್ಲ ಹಾಜಿ, ಈಂದುಮೂಲೆ ಮುಹಮ್ಮದ್ ಹಾಜಿ, SKSSF ಪಾಳ್ಯತ್ತಡ್ಕ ಶಾಖೆ ಕಾರ್ಯದರ್ಶಿ ಪಿ. ಎಂ ಶರೀಫ್ ಹಾಗೂ ಹಲವಾರು ಜಮಾಅತಿನ ವ್ಯಕ್ತಿಗಳು ಉಪಸ್ಥಿತರಿದ್ದರು.