ಪುತ್ತೂರು: ಪುತ್ತೂರು ಮತ್ತು ಕಡಬ ತಾಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ 20 ಅಂಶಗಳ ಸಭೆಯಲ್ಲಿ ಆರ್ಯಾಪು ಪ್ರಾಥಮಿಕ ಕೃಷಿ ಪತ್ತಿನ ಸಂಘದಲ್ಲಿ ವಿವಿಧ ಹುದ್ದೆಗಳಲ್ಲಿ ಸುಮಾರು 41 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಸಿಇಓ ಜಯಂತಿ ಭಾಸ್ಕರ್ ಮತ್ತು ಕೊಳ್ತಿಗೆ ಪ್ರಾಥಮಿಕ ಕೃಷಿ ಪತ್ತಿನ ಸಂಘದಲ್ಲಿ ವಿವಿಧ ಹುದ್ದೆಗಳಲ್ಲಿ ಸುಮಾರು 38 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಸಿಇಓ ಗಿರಿಜಾ ದಾಮೋದರ್ ಇವರಿಗೆ ಸನ್ಮಾನ ಕಾರ್ಯಕ್ರಮ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಸಭಾಂಗಣದಲ್ಲಿ ನಡೆಯಿತು.
ಈ ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ನಿರ್ದೇಶಕರಾದ ಶಶಿಕುಮಾರ್ ರೈ ಬಾಲ್ಯೊಟ್ಟು ವಹಿಸಿ ಆರ್ಯಾಪು ಪ್ರಾಥಮಿಕ ಕೃಷಿ ಪತ್ತಿನ ಸಂಘದಲ್ಲಿ ನಿವೃತ್ತರಾದ ಸಿಇಓ ಜಯಂತಿಭಾಸ್ಕರ್ ಮತ್ತು ಕೊಳ್ತಿಗೆ ಪ್ರಾಥಮಿಕ ಕೃಷಿ ಪತ್ತಿನ ಸಂಘದಲ್ಲಿ ನಿವೃತ್ತರಾದ ಸಿಇಓ ಗಿರಿಜಾದಾಮೋದರ್ ರವರನ್ನು ಮುಖ್ಯ ಅತಿಥಿಗಳೊಂದಿಗೆ ಶಾಲು ಹೊದಿಸಿ ಫಲಪುಷ್ಪಗಳೊಂದಿಗೆ ಸ್ಮರಣಿಕೆ ನೀಡಿ ಗೌರವಿಸಿ ಈರ್ವರ ಕಾರ್ಯವೈಖರಿಯನ್ನು ಅಭಿನಂದಿಸಿದರು. ಆರ್ಯಾಪು ಮತ್ತು ಕೊಳ್ತಿಗೆ ಸಹಕಾರ ಸಂಸ್ಥೆ ಅತ್ಯುತ್ತಮವಾಗಿ ಅಭಿವೃಧ್ದಿ ಹೊಂದಿದ ಬಗ್ಗೆ ಹರ್ಷ ವ್ಯಕ್ತಪಡಿಸಿ ಶುಭಹಾರೈಸಿದರು. ಆರ್ಯಾಪಿನ ನೂತನ ಸಿಇಓ ಅಜಿತ್ ರೈ ರವರಿಗೆ ಹೂಗುಚ್ಚ ನೀಡಿ ಅಭಿನಂದಿಸಿದರು. ಮುಖ್ಯ ಅತಿಥಿಯಾದ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ನಿರ್ದೇಶಕರಾದ ಎಸ್.ಬಿ ಜಯರಾಮ ರೈ ರವರು ನಿವೃತ್ತರಿಗೆ ಶುಭಹಾರೈಸಿ, ಕೊಳ್ತಿಗೆಯ ನೂತನ ಸಿಇಓ ಬಾಲಗಂಗಾಧರ್ ಗೌಡ ರವರಿಗೆ ಹೂಗುಚ್ಚ ನೀಡಿ ಅಭಿನಂದಿಸಿದರು. ಪುತ್ತೂರು ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಎಂ.ಎಸ್ ರಘುರವರು ನಿವೃತ್ತರಿಗೆ ಸನ್ಮಾನಿಸಿ ಶುಭಹಾರೈಸಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಡಿಸಿಸಿ ಬ್ಯಾಂಕಿನ ಪುತ್ತೂರು ಶಾಖೆಯ ವ್ಯವಸ್ಥಾಪಕರಾದ ಹರೀಶ್ ರೈ ಶುಭಹಾರೈಸಿರು.
ಸನ್ಮಾನಿತರಾದ ಜಯಂತಿಭಾಸ್ಕರ್ ಮತ್ತು ಗಿರಿಜಾದಾಮೋದರ್ ತಮ್ಮ ಸೇವಾವಧಿಯಲ್ಲಿ ಸಹಕರಿಸಿದ ಎಲ್ಲರನ್ನು ಸ್ಮರಿಸಿಕೊಂಡು ಕೃತಜ್ಞತೆ ಸಲ್ಲಿಸಿದರು. ಜಯಂತಿ ಭಾಸ್ಕರ್ ರವರ ಬಗ್ಗೆ ಮುಂಡೂರಿನ ಸಿಇಓ ಜಯಪ್ರಕಾಶ್ ರೈ ಮತ್ತು ಗಿರಿಜಾ ದಾಮೋದರ್ ರವರ ಬಗ್ಗೆ ಇರ್ದೆ-ಬೆಟ್ಟಂಪಾಡಿ ಸಿಇಓ ರಾಮಯ್ಯ ರೈ ಶುಭ ಹಾರೈಸಿದರು. ವಲಯ ಮೇಲ್ವಿಚಾರಕರಾದ ವಸಂತ ಎಸ್ , ಶರತ್ ಡಿ, ಪ್ರದೀಪ್ ಕೆ, ಮನೋಜ್ ಎಂ ಹಾಗೂ ಪುತ್ತೂರು ಮತ್ತು ಕಡಬ ತಾಲೂಕಿನ ಸಹಕಾರ ಸಂಘಗಳ ಮುಖ್ಯಕಾರ್ಯನಿರ್ವಹಣಾಧಿಕಾರಿಗಳಾದ ನರಿಮೊಗರು ಸಂಘದ ಮದುಕರ್ ಸಿ. ಎಚ್, ಕೆದಂಬಾಡಿಯ ವಿನಯಕುಮಾರ್ ರೈ ನೆಲ್ಯಾಡಿಯ ದಯಾಕರ ರೈ , ಪಾಣಾಜೆಯ ಹರೀಶ್ ಕುಮಾರ್ , ಕಾವು ಸಹಕಾರ ಸಂಘದ ಸಿಇಓ ಕೇಶವ ಮೂರ್ತಿ, ಕುಂಬ್ರದ ಭವಾನಿ ಬಿ.ಆರ್, ಬನ್ನೂರಿನ ರಾಧ ರೈ , ಉಪ್ಪಿನಂಗಡಿಯ ಶೋಭ, ಹೊಸಮಠದ ಸೋಮಸುಂದರ್ ಶೆಟ್ಟಿ, ,ಬಿಳಿನೆಲೆಯ ಪುನೀತ್, ಕಡಬದ ಬಾಲಕೃಷ್ಣ, ಎಡಮಂಗಲದ ರಮೇಶ್ ಬಿ , ಏನೆಕಲ್ಲಿನ ರತನ್, ಸುಬ್ರಹ್ಮಣ್ಯದ ಪ್ರಕಾಶ್, ಆಲಂಕಾರಿನ ಮನೋಹರ್, ಬಲ್ನಾಡಿನ ಕೀರ್ತನ್ ಶೆಟ್ಟಿ ಉಪಸ್ಥಿತರಿದ್ದರು. ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಿಇಓ ಚಂದ್ರಶೇಖರ್ ಪಿ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಚಾರ್ವಕದ ಸಿಇಓ ಅಶೋಕ್ ಗೌಡ ವಂದಿಸಿದರು.
