18-11-2025
ಪುತ್ತೂರು ಟೌನ್ ಬ್ಯಾಂಕ್ ಸಭಾಂಗಣದಲ್ಲಿ ಬೆಳಿಗ್ಗೆ ೯.೩೦ರಿಂದ ೭೨ನೇ ಅಖಿಲ ಭಾರತ ಸಹಕಾರ ಸಪ್ತಾಹ- ತಾಲೂಕು ಮಟ್ಟದ ಸಹಕಾರ ಸಪ್ತಾಹ ಸಮಾರಂಭ, “ಸಹಕಾರಿ ಉದ್ಯಮ ಶೀಲತೆಯಿಂದ ಯುವಜನ, ಮಹಿಳಾ ಮತ್ತು ಅಬಲ ವರ್ಗದ ಸಬಲೀಕರಣ” (ಕರಕುಶಲ, ಕೈ ಮಗ್ಗ, ಕಾರ್ಮಿಕ, ಮೀನುಗಾರಿಕೆ) ಕುರಿತು ವಿಚಾರಗೋಷ್ಠಿ
ಕೊಂಬೆಟ್ಟು ಮಹಾಲಿಂಗೇಶ್ವರ ಐಟಿಐಯಲ್ಲಿ ಮಧ್ಯಾಹ್ನ ೩ರಿಂದ ಸುದ್ದಿ ಅರಿವು ಕೇಂದ್ರದಿಂದ ನವೋದ್ಯಮಗಳಿಗಾಗಿ ಮಾಹಿತಿ ಶಿಬಿರದ ಪೂರ್ವಭಾವಿ ಮಾಹಿತಿ ಕಾರ್ಯಾಗಾರ
ಇಡ್ಕಿದು ಗ್ರಾ.ಪಂ ಸಭಾಭವನದಲ್ಲಿ ಬೆಳಿಗ್ಗೆ ೧೦.೩೦ಕ್ಕೆ ಗ್ರಾಮಸಭೆ
ಪಾಣಾಜೆ ಗ್ರಾ.ಪಂ ಸಭಾಭವನದಲ್ಲಿ ಬೆಳಿಗ್ಗೆ ೧೦.೩೦ಕ್ಕೆ sಸಾಮಾನ್ಯ ಸಭೆ
ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಜಾತ್ರೋತ್ಸವದ ಪ್ರಯುಕ್ತ ಬೆಳಿಗ್ಗೆ ೯ಕ್ಕೆ ಗೊನೆ ಕಡಿಯುವ ಮುಹೂರ್ತ
ಕಡಬ ತಾಲೂಕು ಕಚೇರಿ ಬಳಿ ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ವತಿಯಿಂದ ರೈತರ ವಿವಿಧ ಬೇಡಿಕೆಗಳ ಹಕ್ಕೊತ್ತಾಯ ಸಭೆ
ವಿಟ್ಲ ವಿಠಲ ಪದವಿಪೂರ್ವ ಕಾಲೇಜಿನ ಸುವರ್ಣ ರಂಗ ಮಂದಿರದಲ್ಲಿ ಬೆಳಿಗ್ಗೆ ೯.೩೦ರಿಂದ ಪ್ರೌಢಶಾಲಾ ವಿಭಾಗದ ವಾರ್ಷಿಕೋತ್ಸವ
ಒಳಮೊಗ್ರು ಗ್ರಾಮ ಶಿರೋಡಿಯನ್ ತರವಾಡು ಮನೆ ಕೈಕಾರದಲ್ಲಿ ಬೆಳಿಗ್ಗೆ ೭ರಿಂದ ಗಣಪತಿ ಹೋಮ, ೮.೨೧ಕ್ಕೆ ಧರ್ಮದೈವ, ಪರಿವಾರ ದೈವಗಳ ಪ್ರತಿಷ್ಠೆ, ಧೂಮವತಿ ದೈವ, ವರ್ಣರ ಪಂಜುರ್ಲಿ ಕೊರತಿ ಮೈಯಂತಿ, ರಾಜನ್ ಪೀಠ ಪ್ರತಿಷ್ಠಾ ಕಾರ್ಯಕ್ರಮ, ೧೧ರಿಂದ ಪಾನಕ ಪೂಜೆ, ರಕ್ತೇಶ್ವರಿ ಗುಳಿಗ ದೈವದ ತಂಬಿಲ, ಸಂಜೆ ೪ರಿಂದ ರಾಹುಗುಳಿಗ ದೈವದ ತಂಬಿಲ, ಕಲ್ಲಾಳಗುಳಿಗ ದೈವದ ಕೋಲ, ಮೈಸಂದಾಯ ನೇಮ, ಧೂಮಾವತಿ ದೈವದ ನೇಮ, ವರ್ಣರ ಪಂಜುರ್ಲಿ ದೈವಗಳ ನೇಮ
ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ, ಕಂಚಿಮಾರು ಕಟ್ಟೆ ಉತ್ಸವ
ಬಿ.ಸಿ. ರೋಡು ಸ್ಪರ್ಶಾ ಕಲಾಮಂದಿರದಲ್ಲಿ ಬೆಳಿಗ್ಗೆ ೮ರಿಂದ ಧರ್ಮದರ್ಶಿ ಹರಿಕೃಷ್ಣ ಪುನರೂರು, ಬೆಳ್ಳಿಪ್ಪಾಡಿ ರಮಾನಾಥ ರೈಯವರಿಗೆ ಅಭಿನಂದನಾ ಸಮಾರಂಭ
ದರ್ಬೆ ಲಿಟ್ಲ್ ಫ್ಲವರ್ ಶಾಲೆಯಲ್ಲಿ ಮಧ್ಯಾಹ್ನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಬಾಲಕೃಷ್ಣ ರೈ ಪೋರ್ದಾಲ್ರವರಿಗೆ ಅಭಿನಂದನೆ
ಪುತ್ತೂರು ಮಾಯಿದೇ ದೇವುಸ್ ಚರ್ಚ್ ಬಳಿಯಿಂದ ದರ್ಬೆ ಬೆಥನಿ ಶಾಲೆಯಿಂದ ರಾಜ್ಯ, ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಕ್ರೀಡಾಪಟುಗಳಿಗೆ ಸ್ವಾಗತ, ಮೆರವಣಿಗೆ
ಉತ್ತರಕ್ರಿಯೆ
ಪುತ್ತೂರು ಎಂ.ಟಿ ರಸ್ತೆ, ಶ್ರೀ ಮಹಮ್ಮಾಯಿ ದೇವಸ್ಥಾನದ ಸಭಾಭವನದಲ್ಲಿ ಮಧ್ಯಾಹ್ನ ತೆಂಕಿಲ ದಿ. ಕುಶಾಲಪ್ಪ ಗೌಡರ ಪತ್ನಿ ಸೀತಮ್ಮರವರ ಉತ್ತರಕ್ರಿಯೆ
ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವರ ಸನ್ನಿಧಿಯಲ್ಲಿ ಮಧ್ಯಾಹ್ನ ೧೨.೩೦ಕ್ಕೆ ನಾರಾಯಣ ರೈ ಅಮೆಕಾರುಗುತ್ತು ಮಿತ್ತೋಡಿರವರ ಉತ್ತರಕ್ರಿಯೆ