ಬೆಳ್ತಂಗಡಿ: ಸೌತ್ ಕೆನರ ಫೊಟೋಗ್ರಾಫರ್ ಅಸೋಸಿಯೇಶನ್ ಬೆಳ್ತಂಗಡಿ ವಲಯ ಇದರ ವತಿಯಿಂದ ಸದಸ್ಯರಿಗೆ ನಿಕೋನ್ ಕಾರ್ಯಗಾರವು ಸಿವಿಸಿ ಹಾಲ್ ಚರ್ಚ್ ರೋಡ್ ಬೆಳ್ತಂಗಡಿಯಲ್ಲಿ ನ.4ರಂದು ಜರುಗಿತು.
ತರಬೇತಿಯ ಉದ್ಘಾಟನೆಯನ್ನು ಸೂರಜ್ ಪ್ರಭು ಬೆಂಗಳೂರು ಇವರು ದೀಪ ಬೆಳಗಿಸಿ ಉದ್ಘಾಟಿಸಿದರು.
ವೇದಿಕೆಯಲ್ಲಿ ಸ್ಥಾಪಕ ಅಧ್ಯಕ್ಷರಾದ ಪಾಲಾಕ್ಷ ಪಿ.ಸುವರ್ಣ , ಸಂಘದ ಅಧ್ಯಕ್ಷರಾದ ಅಶೋಕ್ ಆಚಾರ್ಯ, ಜಿಲ್ಲಾ ಪತ್ರಿಕಾ ಪ್ರತಿನಿಧಿ ಉಮೇಶ್ ಮದ್ದಡ್ಕ, ವಲಯ ಪ್ರಧಾನ ಕಾರ್ಯದರ್ಶಿ ಹರ್ಷ ಬಳ್ಳಮಂಜ, ಕೋಶಾಧಿಕಾರಿ ಹರೀಶ್ ಕೊಳ್ತಿಗೆ, ತರಬೇತುದಾರರಾಗಿ ಪಿ.ವಿ ಬೆಂಗಳೂರು, ಸುಧೀರ್, ಕಾರ್ತೀಕ್, ಮಹಾವೀರ್ ಮಂಗಳೂರು ಉಪಸ್ಥಿತರಿದ್ದರು.
ಎಸ್ ಕೆಪಿಎ ಜಿಲ್ಲಾ ಸಹಕಾರಿ ಸಂಘದ ನಿರ್ದೇಶಕರಾದ ವಿಲ್ಸನ್ ಜಾರ್ಜ್ ಗೋನ್ಸಾಲಿಸ್ ಇವರು ಸ್ವಾಗತಿಸಿ ಧನ್ಯವಾದ ಕೋರಿದರು. ವಲಯದ ಸದಸ್ಯರು ತರಬೇತಿ ಪಡೆದುಕೊಂಡರು.