ಕಲ್ಮಂಜ: ಪ್ರಧಾನಮಂತ್ರಿ ವನ ಧನ ಯೋಜನೆ ಯಿಂದ ನಿಸರ್ಗ ವನ ಧನ ಒಕ್ಕೂಟ ಬೆಳ್ತಂಗಡಿ ವತಿಯಿಂದ, ಉಜಿರೆ ಅನುಗ್ರಹ ಶಾಲ ಬಳಿ ಕಲ್ಮಂಜ ಮಠಾಟಿ ಸಭಾಭವನದಲ್ಲಿ ಹಾಳೆ ತಟ್ಟೆಘಟಕ ನಂ.15ರಂದು ಉದ್ಘಾಟನೆಗೊಂಡಿತು.
ಉದ್ಘಾಟನೆಯನ್ನು ವಿಧಾನ ಪರಿಷತ್ ಶಾಸಕ ಪ್ರತಾಪ್ ಸಿಂಹ ನಾಯಕ್ ಉದ್ಘಾಟಿಸಿ ಮಾತನಾಡಿ ಕೇಂದ್ರ ಸರಕಾರದ ಪ್ರಧಾನಿ ಮಂತ್ರಿ ವನ ಧನ ಯೋಜನೆಯನ್ನು ಸರಿಯಾಗಿ ಸದುಪಯೋಗಿ ಪಡಿಸಿಕೊಂಡು ಉದ್ದಿಮೆಯಲ್ಲಿ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಕುಸುಮಾದಾರ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಹೇಮಚಂದ್ರ, ಕಲ್ಮಂಜ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಧರ್ ,ಉಜಿರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಪುಷ್ಪಾವತಿ ಆರ್ ಶೆಟ್ಟಿ, ಕಣಿಯೂರು ಗ್ರಾಮ ಪಂಚಾಯತಿ ಅಧ್ಯಕ್ಷ ಗಾಯತ್ರಿ ಬೆಳ್ತಂಗಡಿ ನಿಸರ್ಗ ವನದನ ಒಕ್ಕೂಟದ ಅಧ್ಯಕ್ಷ ಲಿಂಗಪ್ಪ ನಾಯ್ಕ, ಲ್ಯಾಂಪ್ ಸೊಸೈಟಿಯ ಮುಖ್ಯ ಕಾರ್ಯನಿರ್ವಾಧಿಕಾರಿ ಜಯಂತಿ ಉಪಸ್ಥಿತರಿದ್ದರು.
ನಿರ್ದೇಶಕರಾದ ಸೀತಾರಾಮ್ ಬೆಳಾಲು ಕಾರ್ಯಕ್ರಮ ನಿರೂಪಿಸಿ, ನಿರ್ದೇಶಕರಾದ ಚೆನ್ನಕೇಶವ ಸ್ವಾಗತಿಸಿ ,ಉಪಾಧ್ಯಕ್ಷ ಸಂತೋಷ್ ಧನ್ಯವಾದವಿತ್ತರು.