ಧರ್ಮಸ್ಥಳ : ಧರ್ಮಸ್ಥಳ ಪ್ರಾಥಮಿಕ ಕೃಷಿ ಪತ್ತಿ ನ ಸಹಕಾರ ಸಂಘಕ್ಕೆ ಮುಂದಿನ ಐದು ವರ್ಷಗಳ ಅವಧಿಗೆ ಆಡಳಿತ ಮಂಡಳಿ , ನಿರ್ದೇಶಕರ ಆಯ್ಕೆಗೆ ಚುನಾವಣೆಯ ಅ.30 ರಂದು ನಡೆಯಿತು . ಒಟ್ಟು 12 ನಿರ್ದೇಶಕರ ಸ್ಥಾನಗಳಲ್ಲಿ ಎಲ್ಲಾ 12 ಸ್ಥಾನಗಳಲ್ಲಿಯು ಬಿ ಜೆ ಪಿ ಬೆಂಬಲಿತ ಸಹಕಾರ ಭಾರತಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.
ಸಾಲಗಾರರ ಕ್ಷೇತ್ರದ ಸಾಮಾನ್ಯ 5 ಸ್ಥಾನಕ್ಕೆ ಸಹಕಾರ ಭಾರತಿ ಬೆಂಬಲಿತರಾಗಿ ಹಾಲಿ ಅಧ್ಯಕ್ಷ ಹರಿದಾಸ್ ಗಾಂಭೀರ, ಅಜಿತ್ ಕುಮಾರ್, ನೀಲಾಧರ ಶೆಟ್ಟಿ, ಪ್ರಭಾಕರ ಗೌಡ ಬೊಲ್ಮ, ಪ್ರಸನ್ನ ಹೆಬ್ಬಾರ್, ಸಾಲಗಾರರ ಕ್ಷೇತ್ರ ದ ಹಿಂದುಳಿದ ಬಿ. ಪ್ರವರ್ಗ ಸ್ಥಾನದ ವಿಕ್ರಮ್ ಗೌಡ,ಹಿಂದುಳಿದ ಎ. ಪ್ರವರ್ಗದಿಂದ ಪ್ರೀತಮ್ ಡಿ., ಸಾಲಗಾರರ ಕ್ಷೇತ್ರದ ಪರಿಶಿಷ್ಟ ಪಂಗಡ ಸ್ಥಾನದಿಂದ ಉಮಾನಾಥ್, ಸಾಲಗಾರರ ಕ್ಷೇತ್ರದ ಪರಿಶಿಷ್ಟ ಜಾತಿ ಸ್ಥಾನದಿಂದ ಶೀನ, ಸಾಲಗಾರರ ಕ್ಷೇತ್ರದ ಮಹಿಳಾ ಮೀಸಲು ಎರಡು ಸ್ಥಾನಕ್ಕೆ ಧನಲಕ್ಷ್ಮಿ, ಶಂಭಾವಿ ರೈ, ಸಾಲಗಾರರಲ್ಲದ ಕ್ಷೇತ್ರದ ಸಾಮಾನ್ಯ ಸ್ಥಾನಕ್ಕೆ ಚಂದ್ರಶೇಖರ್ ಸೇರಿ ಎಲ್ಲಾ 12 ಸ್ಥಾನಗಳಲ್ಲಿ ಸಹಕಾರ ಭಾರತಿ ಬೆಂಬಲಿತರು ಜಯಗಳಿಸಿದ್ದಾರೆ. ಮಹಾಸಭೆಗೆ ಬಾರದ ಸದಸ್ಯರಿಗೆ ಮತದಾನದ ಹಕ್ಕು ನೀಡ ಬೇಕು ಎಂದು ಕೆಲವು ಸದಸ್ಯರು ಕೋರ್ಟಿಗೆ ಹೋಗಿದ್ದುದರಿಂದ ಕೋರ್ಟ್ ತಡೆ ಇರುವುದರಿಂದ ಚುನಾವಣಾ ಅಧಿಕಾರಿಗಳು ಫಲಿತಾಂಶವನ್ನು ಪ್ರಕಟ ಪಡಿಸಲು ತಡೆ ಹಿಡಿದಿದ್ದು ಚುನಾವಣಾ ಅಧಿಕಾರಿಗಳು ನ.19 ರಂದು ಪ್ರಕಟಿಸಿದರು.