ಪುತ್ತೂರು : ಸವಣೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಪಾಲ್ತಾಡಿ ಗ್ರಾಮದ ಪಾಲ್ತಾಡಿ ಮಂಜುನಾಥ ರೈ ಕಲಾಯಿಯವರ ಉತ್ತರ ಕ್ರೀಯಾದಿ ಸದ್ಗತಿ ಕಾರ್ಯಕ್ರಮ ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ಸನ್ನಿಧಿಯಲ್ಲಿ ಮೇ.1 ರಂದು ನಡೆಯಿತು. ಬಳಿಕ ನೇತ್ರಾವತಿ ಸಮುದಾಯ ಭವನದಲ್ಲಿ ಶ್ರದ್ಧಾಂಜಲಿ ಸಭೆ ನಡೆಯಿತು. ಕೋಟೆ ರಾಕೇಶ್ ರೈ ಮೈಸೂರುರವರು ನುಡಿನಮನ ಸಲ್ಲಿಸಿದರು. ಮೃತರ ಭಾಚಿತ್ರಕ್ಕೆ ಪುಷ್ಪಾರ್ಚಣೆ ಸಲ್ಲಿಸಲಾಯಿತು. ಮೃತರ ಪತ್ನಿ, ಮಕ್ಕಳು, ಅಳಿಯಂದಿರು, ಕುಟುಂಬಸ್ಥರು, ಬಂಧು ಮಿತ್ರರು ಉಪಸ್ಥಿತರಿದ್ದರು.