- ಚಂದ್ರಹಾಸ ಶೆಟ್ಟಿ ಮ್ಹಾಲಕತ್ವದ ಪುತ್ತೂರು ಫ್ರೆಂಡ್ಸ್ ತಂಡ ಪ್ರಥಮ
ಪುತ್ತೂರು: ಕಾರ್ಮಿಕ ದಿನಾಚರಣೆಯ ಅಂಗವಾಗಿ ಇಂಟಕ್ ನೇತೃತ್ವದಲ್ಲಿ, ಇಂಟಕ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಸ್ಟೇಟ್ ಅಮೆಚ್ಚೂರು ಕಬಡ್ಡಿ ಅಸೋಸಿಯೇಶನ್ ಚೇರ್ಮನ್ ಆಗಿರುವ ರಾಕೇಶ್ ಮಲ್ಲಿಯವರ ಸಾರಥ್ಯದಲ್ಲಿ ಚಿತ್ರಾಪುರದಲ್ಲಿ ನಡೆದ ಕಬಡ್ಡಿ ಪಂದ್ಯಾಟದಲ್ಲಿ ಕೋಟಿ ಚೆನ್ನಯ ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ಮಾಲಕತ್ವದ `ಪುತ್ತೂರು ಫ್ರೆಂಡ್ಸ್’ ತಂಡ ಪ್ರಥಮ ಸ್ಥಾನ ಪಡೆದುಕೊಂಡಿದೆ.
ಖ್ಯಾತ ಪ್ರೋ.ಕಬಡ್ಡಿ ಆಟಗಾರ ಪ್ರಶಾಂತ್ ರೈ ಕೈಕಾರರವರ ಮಾರ್ಗದರ್ಶನದಲ್ಲಿ ಪಂದ್ಯಾಟದಲ್ಲಿ ಉತ್ತಮ ಪ್ರದರ್ಶನ ನೀಡಿದ ಪುತ್ತೂರು ಫ್ರೆಂಡ್ಸ್ ತಂಡವು ಪ್ರಥಮ ಸ್ಥಾನ ಪಡೆದು ರೂ.50,000 ನಗದು ಹಾಗೂ ಟ್ರೋಫಿಯನ್ನು ಪಡೆದುಕೊಂಡಿದೆ. ತಂಡದ ಮ್ಹಾಲಕ ಚಂದ್ರಹಾಸ ಶೆಟ್ಟಿ, ಖ್ಯಾತ ಪ್ರೋ.ಕಬಡ್ಡಿ ಆಟಗಾರ ಪ್ರಶಾಂತ್ ರೈ ಕೈಕಾರ, ಸುಜಿತ್ ಕುಮಾರ್ ಶೆಟ್ಟಿ ನಡುಬೈಲು, ಗಂಗಾಧರ ಶೆಟ್ಟಿ ಕೈಕಾರ, ರೋಶನ್ ರೈ ಬನ್ನೂರು, ಪ್ರವೀಣ್ ನಾಯ್ಕ್, ಪ್ರವೀಣ್ ಶೆಟ್ಟಿ ಅಳಕೆಮಜಲು, ಪ್ರಣಾಮ್ ಶೆಟ್ಟಿ ಕೈಕಾರ, ಬಿಪಿನ್ ಶೆಟ್ಟಿ ಸವಣೂರು, ಪ್ರದೀಪ್ ಶೆಟ್ಟಿ, ಲಿಖಿತ್ ರೈ ಹಾಗೂ ಶಮಿತ್ ರೈ ಮೊದಲಾದವರು ಪಂದ್ಯಾ ಕೂಟದಲ್ಲಿ ಭಾಗವಹಿಸಿದ್ದರು.