ಪುತ್ತೂರು: ಬುಧವಾರ ಸಂಜೆ ಸುರಿದ ಭಾರೀ ಮಳೆಗೆ ಸಿಡಿಲು ಬಡಿದು ತೆಂಹಿನ ಮರ ಸುಟ್ಟು ಪಕ್ಕದ ಮನೆ ವಯರಿಂಗ್ ಭಸ್ಮವಾದ ಘಟನೆ ಸಂಪ್ಯ ವಾಗ್ಲೆಯಲ್ಲಿ ನಡೆದಿದೆ. ವಾಗ್ಲೆ ನಿವಾಸಿ ಶರೀಫ್ ಎಂಬವರ ಅಂಗಳದಲ್ಲಿದ್ದ ತೆಂಗಿನ ಮರಕ್ಕೆ ಸಿಡಿಲು ಬಡಿದು ತೆಂಗಿನಮರ ಸುಟ್ಟು ಹೋಗಿದ್ದು ತುಂಬಾ ಹೊತ್ತಿನ ತನಕ ಬೆಂಕಿ ಕಾಣಿಸಿಕೊಂಡಿತ್ತು. ಇದರ ಪ್ರಭಾವಕ್ಕೆ ಶರೀಫ್ ರವರ ಮನೆಯ ವಯರಿಂಗ್ ಹಾಗೂ ವಿದ್ಯುತ್ ಉಪಕರಣಗಳಿಗೆ ಹಾನಿಯಾಗಿದೆ